Publish Date: Wed, 20 Jan 2021 (10:33 IST)
Updated Date: Wed, 20 Jan 2021 (10:34 IST)
ಮಹಾರಾಜ್ ಗಂಜ್ : 12 ವರ್ಷದ ಹುಡುಗಿಯ ಮೇಲೆ ಕಾಡಿನಲ್ಲಿ ಮಾನಭಂಗ ಎಸಗಿ ಆಕೆಯನ್ನು ಕೊಲೆ ಮಾಡಿದ ಘಟನೆ ಮಹಾರಾಜ್ ಗಂಜ್ ಜಿಲ್ಲೆಯ ಪುರಂದರ್ ಪುರ ಪ್ರದೇಶದಲ್ಲಿ ನಡೆದಿದೆ.
ತಾಯಿಯೊಂದಿಗೆ ಹುಲ್ಲು ಕತ್ತರಿಸಲು ಬಂದ ಹುಡುಗಿ ಅದನ್ನು ಮನೆಗೆ ಕಂಡೊಯ್ಯಲು ಸೈಕಲ್ ತರಲು ಮನೆಗೆ ತೆರಳಿ ಅಲ್ಲಿಂದ ಸೈಕಲ್ ನೊಂದಿಗೆ ಹೊರಟ ಹುಡುಗಿ ಮತ್ತೆ ಮನೆಗೆ ಹಿಂತಿರುಗಲಿಲ್ಲ ಎನ್ನಲಾಗಿದೆ. ಮನೆಯವರು ಹುಡುಗಿಯ ಹುಡುಕಾಟದಲ್ಲಿ ತೊಡಗಿದಾಗ ಆಕೆಯ ರಕ್ತಸಿಕ್ತವಾದ ಶವ ಮನೆಯಿಂದ 500ಮೀ. ದೂರದಲ್ಲಿದ್ದ ಕಾಡಿನಲ್ಲಿ ಪತ್ತೆಯಾಗಿದೆ.
ಮನೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.