Publish Date: Fri, 18 Dec 2020 (09:00 IST)
Updated Date: Fri, 18 Dec 2020 (09:02 IST)
ಲಕ್ನೋ: ಸಂತಾನವಿಲ್ಲದ ದಂಪತಿಯೊಂದು ಕರುವನ್ನೇ ಮಗುವಾಗಿ ದತ್ತು ತೆಗೆದುಕೊಂಡು ನೂರಾರು ಜನರನ್ನು ಕರೆದು ನಾಮಕರಣ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಿಜಯಪಾಲ್ ಮತ್ತು ರಾಜೇಶ್ವರಿ ದೇವಿ ಎಂಬ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ವಿಜಯ್ ಪಾಲ್ ತಂದೆ ಸಾಕುತ್ತಿದ್ದ ದನದ ಕರುವನ್ನೇ ಮಗುವಿನಂತೆ ದತ್ತು ಪಡೆದ ದಂಪತಿ ಅದಕ್ಕೆ ಲಾಲ್ತು ಬಾಬ ಎಂದು ನಾಮಕರಣ ಮಾಡಿ ತಮ್ಮ ಪುತ್ರನಾಗಿ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಸುಮಾರು 500 ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು.