Publish Date: Tue, 16 Oct 2018 (10:01 IST)
Updated Date: Tue, 16 Oct 2018 (10:03 IST)
ನವದೆಹಲಿ: ಎಎಪಿ ದಿವಾಳಿಯಾಗಿದೆ. ಚುನಾವಣೆ ಎದುರಿಸಲೂ ದುಡ್ಡಿಲ್ಲ. ಹಣ ಡೊನೇಟ್ ಮಾಡಿ ಎಂದು ಎಎಪಿ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ.
2019 ರ ಲೋಕಸಭೆ ಚುನಾವಣೆ ಎದುರಿಸಲು ಪಕ್ಷಕ್ಕೆ ಧನ ಸಹಾಯ ಮಾಡುವಂತೆ ಪಕ್ಷದ ಬೆಂಬಲಿಗರು, ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
‘ಒಂದು ಪಕ್ಷ ದಿವಾಳಿಯಾಗಿ, ಅದು ನಡೆಸುವ ಸರ್ಕಾರ ಶ್ರೀಮಂತವಾಗಿರುವುದು ಇದೇ ಮೊದಲು. ಅದರ ಅರ್ಥ ನಾವು ನಮ್ಮ ಪಕ್ಷವನ್ನು ನಿಮ್ಮ ಹಣದಲ್ಲೇ ನಡೆಸಿದ್ದೇವೆ. ಅಕ್ರಮ ಸಂಪಾದನೆ ಮಾಡಿಲ್ಲ’ ಎಂದು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.