Select Your Language

Notifications

webdunia
webdunia
webdunia
webdunia

ನಂಗೂ ಸಿಎಂ ಆಗಬೇಕೆಂಬ ಆಸೆ ಇರಲ್ವಾ: ಸಿಎಂ ಕುರ್ಚಿ ಜಮೀರ್ ಅಹ್ಮದ್ ಕಣ್ಣು

Zameer Ahmed Khan

Krishnaveni K

ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2024 (14:36 IST)
ಬೆಂಗಳೂರು: ಸಿಎಂ ಆಗಬೇಕೆಂಬ ಆಸೆ ಯಾರಿಗಿರಲ್ಲ ಹೇಳಿ? ನನಗೂ ಇದೆ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ಸಿಎಂ ಕುರ್ಚಿಗೇ ಟವೆಲ್ ಹಾಕಿದ್ದಾರೆ.

ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ತಮಗೂ ಮುಂದೆ ಸಿಎಂ ಆಗಬೇಕೆಂಬ ಆಸೆಯಿದೆ ಎಂದಿದ್ದಾರೆ. ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ, ಕೆಲವು ಹಿರಿಯ ನಾಯಕರು ಸಿಎಂ ಆಗಬೇಕೆಂದು ಬಯಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೂ ಆಸೆಯಿದೆ ಎಂದಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ನನಗೂ ಸಿಎಂ ಆಗಬೇಕೆಂಬ ಆಸೆಯಿದೆ ಎಂದಿದ್ದರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ‘ಅವರು ಹಿರಿಯ ನಾಯಕರು. ಐದೋ ಆರೋ ಬಾರಿ ಶಾಸಕರಾಗಿ ಗೆದ್ದು ಬಂದವರು. ನನಗೆ ಆಸೆಯಿದೆ ಎಂದಿದ್ದಾರೆ. ಸಿಎಂ ಆಗಬೇಕೆಂದು ಯಾರಿಗೆ ಆಸೆ ಇರಲ್ಲ ಹೇಳಿ? ನನಗೂ ಇಲ್ವಾ? ನಿಮಗೂ ಅವಕಾಶ ಕೊಟ್ಟರೆ ಸಿಎಂ ಆಗಬೇಕೆಂಬ ಆಸೆಯಿರಲ್ವಾ? ಅದೇ ರೀತಿ ಅವರೂ ಆಸೆ ಹೇಳಿಕೊಂಡಿದ್ದಾರೆ’ ಎಂದಿದ್ದಾರೆ.

ಇನ್ನು, ಸಿಎಂ ಬದಲಾವಣೆ ಬಗ್ಗೆ ಕೇಳಿದಾಗ ಗರಂ ಆಗಿ ಉತ್ತರಿಸಿದ ಅವರು ಯಾರು ಯಾರೋ ಹೇಳಿದರೆ ಸಿಎಂ ಬದಲಾವಣೆಯಾಗಲಲ್ಲ. ಸಿಎಂ ಬದಲಾವಣೆಯಾಗುತ್ತದೆ ಎಂದು ರಾಹುಲ್ ಗಾಂಧಿಯವರು ಹೇಳಿದ್ರಾ? ಹಾಗಿದ್ದರೆ ಮಾತ್ರ ಆಗುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ್ ಖರ್ಗೆ​ ವಿರುದ್ಧ ಸಿಎ ನಿವೇಶನ ಮಂಜೂರು ಆರೋಪ: ವಿವರಣೆ ಕೇಳಿದ ರಾಜ್ಯಪಾಲರು