Webdunia - Bharat's app for daily news and videos

Install App

ಆಯುಧ ಪೂಜೆ ದಿನ ಮೈಸೂರು ರಾಜವಂಶಕ್ಕೆ ಗುಡ್ ನ್ಯೂಸ್: ಎರಡನೇ ಮಗುವಿಗೆ ತಂದೆಯಾದ ಯದುವೀರ್ ಒಡೆಯರ್

Krishnaveni K
ಶುಕ್ರವಾರ, 11 ಅಕ್ಟೋಬರ್ 2024 (12:10 IST)
ಮೈಸೂರು: ಆಯುಧ ಪೂಜೆ ದಿನದಂದೇ ಮೈಸೂರು ಯದುವಂಶಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ರಾಜವಂಶಸ್ಥ ಯದುವೀರ್ ಒಡೆಯರ್-ತ್ರಿಷಿಕಾ ಕುಮಾರಿ ಒಡೆಯರ್ ದಂಪತಿಗೆ ಎರಡನೇ ಗಂಡು ಮಗುವಾಗಿದೆ.

ಮೊನ್ನೆಯಷ್ಟೇ ದಸರಾ ಆಚರಣೆ ಸಂದರ್ಭದಲ್ಲಿ ಯದುವೀರ್ ಪತ್ನಿ ರಾಣಿ ತ್ರಿಷಿಕಾ ಉಬ್ಬು ಹೊಟ್ಟೆಯನ್ನು ಮರೆ ಮಾಚುತ್ತಿದ್ದುದು ಎಲ್ಲರ ಕಣ್ಣಿಗೆ ಬಿದ್ದಿತ್ತು. ಇದೀಗ ದಸರಾ ಸಂದರ್ಭದಲ್ಲೇ ಮೈಸೂರು ರಾಜವಂಶಕ್ಕೆ ಮತ್ತೊಬ್ಬ ಕುಡಿಯ ಆಗಮನವಾಗಿರುವುದು ವಿಶೇಷವಾಗಿದೆ.

ಅದೂ ಕ್ಷತ್ರಿಯ ವಂಶಕ್ಕೆ ಆಯುಧ ಪೂಜೆ ದಿನದಂದೇ ಗಂಡು ಮಗುವಿನ ಆಗಮನವಾಗಿರುವುದು ವಿಶೇಷ. ಯದುವೀರ್ ದಂಪತಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಇದೀಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಎರಡನೇ ಮಗುವಿಗೆ ಜನ್ಮ ನೀಡಿರುವ ಸಿಹಿ ಸುದ್ದಿ ಸಿಕ್ಕಿದೆ.

ಯದುವಂಶಕ್ಕೆ ಇನ್ನೊಂದು ಕುಡಿಯ ಆಗಮನವಾಗಿರುವುದರಿಂದ ದಸರಾ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಮೈಸೂರು ರಾಜವಂಶಕ್ಕೆ ಅಲಮೇಲಮ್ಮನ ಶಾಪದಿಂದಾಗಿ ಸಂತಾನ ಇಲ್ಲದೇ ಇತ್ತು. ಆದರೆ ಈಗ ದತ್ತುಪುತ್ರ ಯದುವೀರ್ ಗೆ ಇಬ್ಬರು ಮಕ್ಕಳಾಗಿದ್ದು, ಅಲಮೇಲಮ್ಮನ ಶಾಪ ಕೊನೆಯಾಯಿತು ಎಂದೇ ಹೇಳಬಹುದು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ