Publish Date: Mon, 25 Mar 2019 (17:02 IST)
Updated Date: Mon, 25 Mar 2019 (17:09 IST)
ಪ್ರಧಾನಿ ನರೇಂದ್ರ ಮೋದಿ ಕೆಲದಿನಗಳ ಹಿಂದೆ ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಬೆನ್ನಲ್ಲೇ ಇದೀಗ ಬಿಜೆಪಿ ಅಭ್ಯರ್ಥಿಯೊಬ್ಬರೂ ಅದೇ ಕೆಲಸವನ್ನು ಮಾಡಿದ್ದಾರೆ.
ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು, ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು, ನಗರಸಭೆ ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ.
ನಗರದ ಹಳೇ ಮಟನ್ ಮಾರ್ಕೆಟ್ ರಸ್ತೆಯಲ್ಲಿ ಪೌರ ಕಾರ್ಮಿಕರ ಮನೆಗೆ ತೆರಳಿ ಪಾದಪೂಜೆ ಸಲ್ಲಿಸಿದ್ರು.
ನಗರಸಭೆ ಪೌರ ಕಾರ್ಮಿಕರಾದ ರಾಜು- ಅಶ್ವಿನಿ ದಂಪತಿ ಪಾದಪೂಜೆ ಮಾಡಿದ ಮಂಜು, ಮೋದಿ ಕೊಡುಗೆಗಳನ್ನು ಸ್ಮರಿಸಿದ್ರು.