Publish Date: Fri, 07 Jul 2023 (18:52 IST)
Updated Date: Fri, 07 Jul 2023 (18:56 IST)
ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ಬೀದರ್ ತಾಲೂಕಿನ ಬಗದಲ್ ಗ್ರಾಮದಲ್ಲಿ ನಿರ್ಮಾಣವಾಗಿದೆ. ರಾತ್ರಿ 8 ಗಂಟೆಗೆ ಶುರುವಾದ ಮಳೆಯಿಂದ ರಸ್ತೆ ಬದಿಯಲ್ಲಿದ್ದ ಕಟಿಂಗ್ ಶಾಪ್, ಬೇಕರಿ ಸೇರಿದಂತೆ ಅಂಗಡಿಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕಲು ಜನರು ಹರಸಾಹಸ ಪಟ್ಟರು.. ಸರಿಯಾದ ಸಮಯಕ್ಕೆ ರಸ್ತೆ ಕಾಮಗಾರಿ ಮಾಡದೇ, ಚರಂಡಿಯನ್ನು ಸರಿಪಡಿಸದೇ ಇರುವ ಕಾರಣಕ್ಕೆ ಮಳೆಯ ನೀರು ಅಂಗಡಿಗಳಿಗೆ ನುಗ್ಗಿ ತೊಂದರೆಯಾಗುತ್ತಿದೆ..