Publish Date: Fri, 17 Aug 2018 (20:44 IST)
Updated Date: Fri, 17 Aug 2018 (20:47 IST)
ತುಂಗಭದ್ರಾ ಜಲಾಶಯದ ನೀರು ಹರಿಬಿಟ್ಟ ಪರಿಣಾಮ ಮಂತ್ರಾಲಯ ಸಂಪೂರ್ಣ ನದಿ ನೀರಿನಿಂದ ಆವರಿಸಿದೆ.
ಡ್ಯಾಂ ನೀರು ಹರಿಬಿಟ್ಟ ಪರಿಣಾಮ ರಾಘವೇಂದ್ರ ರಾಯರ ಮಠ ನೀರಿನಿಂದ ಆವೃತವಾಗಿದೆ. ಮಂತ್ರಾಲಯ ಸಂಪೂರ್ಣ ನದಿ ನೀರಿನಿಂದ ಆವರಿಸಿದೆ. ರಾಯರ ಮಠದ ಸನ್ನಿಧಿಯೊಳಗೂ ನೀರು ಇದೆ. ಟಿ.ಬಿ. ಡ್ಯಾಂ ನೀರನ್ನು ನದಿಗೆ ಬಿಟ್ಟ ಪರಿಣಾಮ ರಾಯರ ಮಠದ ಗರ್ಭಗುಡಿ ಒಳಕ್ಕೆ ನೀರು ನುಗ್ಗಿದೆ.
ಮಠದ ಒಳಗಡೆಯಿರುವ ಭಕ್ತರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮಠದ ಆಡಳಿತ ಮಂಡಳಿ ಮನವಿ ಮಾಡಿದೆ.