Publish Date: Fri, 27 Oct 2023 (12:01 IST)
Updated Date: Fri, 27 Oct 2023 (12:03 IST)
ಇಂದು ಹಲವು ಕಾಮಗಾರಿ ಹಿನ್ನೆಲೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಾಲ್ ದುರಸ್ತಿ ಕಾಮಗಾರಿ ನಡೆಯುತ್ತಿದ್ದು,ವಾಲ್ ಗಳ ದುರಸ್ತಿ ಹಿನ್ನೆಲೆ ಬಹುತೇಕ ನಗರದಲ್ಲಿ ನೀರು ಸ್ಥಗಿತವಾಗಿದೆ.
BWSSB ಬಿಡುಗಡೆಯ ಪ್ರಕಾರ ಕಾವೇರಿ ಹಂತ IV, ಹಂತ-I ರ ಎರಡು ಪಂಪ್ಗಳನ್ನು ಗುರುವಾರ ಮುಚ್ಚಲಾಗಿದೆ.ಮಹಾಲಕ್ಷ್ಮಿ ಲೇಔಟ್, ಜೆಸಿ ನಗರ, ಸರಸ್ವತಿ ಪುರಂ,ಮಹಾಲಕ್ಷ್ಮಿ ಲೇಔಟ್, ಭೋವಿ ಪಾಳ್ಯ, ಮೈಕೋ ಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ,2ನೇ ಬ್ಲಾಕ್ನಿಂದ 5ನೇ ಬ್ಲಾಕ್, ಜೇಡರಹಳ್ಳಿ, ರಾಜಾಜಿನಗರ, ಪ್ರಕಾಶ್ ನಗರ, ರಾಜಾಜಿನಗರ 1ನೇ ಬ್ಲಾಕ್,ಮರಪ್ಪನ ಪಾಳ್ಯ, ಕೈಗಾರಿಕಾ ಉಪನಗರ, ಕುರುಬರಹಳ್ಳಿ, ಎಸ್ವಿಕೆ ಲೇಔಟ್, ಕರ್ನಾಟಕ ಲೇಔಟ್, ಕಾವೇರಿನಗರ,ವಯ್ಯಾಲಿಕಾವಲು, ಲಕ್ಷ್ಮಿ ನಗರ, ಕೆಎಚ್ಬಿ ಕಾಲೋನಿ ಸೇರಿ ನಗರದ ಹಲವೆಡೆ ಕಾಮಗಾರಿ ಇರುವ ಕಾರಣ ಇಂದು ನಗರದಲ್ಲಿ ನೀರು ವ್ಯತ್ಯಯವಾಗಲಿದೆ.