Publish Date: Sun, 03 Feb 2019 (20:16 IST)
Updated Date: Sun, 03 Feb 2019 (20:18 IST)
ದಕ್ಷಿಣ ಭಾರತದ ಶ್ರೀಮಂತ ದೇವರು ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಕಳ್ಳತನವಾಗಿದೆ.
ಆಂಧ್ರದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಳ್ಳತನವಾಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ವೆಂಕಟೇಶ್ವರ ಸ್ವಾಮಿಯ ಕಿರೀಟಗಳು ಗರ್ಭಗುಡಿಯಿಂದ ಮಾಯವಾಗಿವೆ. ದೇವರಿಗೆ ಇಡುತ್ತಿದ್ದ ಮೂರು ಉತ್ಸವ ಕಿರೀಟಗಳು ಕಳ್ಳತನವಾಗಿವೆ.
ದೇವಾಲಯದಲ್ಲಿ ತನಿಖೆಯನ್ನು ಟಿಟಿಡಿ ಸಿಇಓ ಗೋಪಿನಾಥ್ ಜೆಟ್ಟ ನಡೆಸಿದರು. ಸ್ಥಳಕ್ಕೆ ತಿರುಪತಿ ನಗರ ಎಸ್ಪಿ ಅನ್ಬುರಾಜನ್ ಭೇಟಿ ನೀಡಿ ದೇವಾಲಯದ ಸಿಸಿಟಿವಿ ಪರಿಶೀಲನೆ ನಡೆಸಿದರು.
ದೇವಾಲಯದ ಅಧಿಕಾರಿಗಳು, ಸಿಬ್ಬಂದಿಯನ್ನು ವಿಚಾರಣೆಯನ್ನು ಉನ್ನತ ಅಧಿಕಾರಿಗಳ ತಂಡ ನಡೆಸುತ್ತಿದೆ.