Publish Date: Mon, 11 Sep 2023 (20:40 IST)
Updated Date: Mon, 11 Sep 2023 (19:45 IST)
ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಒಕ್ಕೂಟ ನಡೆಸಿದ ಬಂದ್ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಖಾಸಗಿ ಅವರಿಗೆ ತೊಂದರೆ ಆಗಿರೋದು ನಿಜ.. ಬಡಜನ ಇರೋದ್ರಿಂದ ಸರ್ಕಾರ ಗಮನ ಕೊಡಬೇಕು. KSRTCಗೂ ಕೂಡ ಸರ್ಕಾರ ಹಣ ಕೊಡುತ್ತಿಲ್ಲ.. ಅದು ಕೂಡ ನಷ್ಟದಲ್ಲಿದೆ ಅದರ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.. ಇನ್ನು ಉಚಿತ ಯೋಜನೆ ನೀಡುತ್ತಾರೆ ಅಂತ ಮನಬಂದಂತೆ ನಡೆದುಕೊಳುತ್ತಿದ್ದಾರೆ.. ಇದು ಸರಿ ಅಲ್ಲ ಅಂತಾ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.