Publish Date: Mon, 11 Sep 2023 (18:30 IST)
Updated Date: Mon, 11 Sep 2023 (19:35 IST)
ಇಂದು ಬೆಂಗಳೂರು ಬಂದ್ ಆಗಿದೆ. ಇದ್ರಿಂದ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಸರ್ಕಾರವೆಂದು ಮಾಜಿ ಸಚಿವ K.S.ಈಶ್ವರಪ್ಪ ಆರೋಪಿಸಿದ್ದಾರೆ.. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿಮಾನದಲ್ಲಿ ಬರುವವರು ಪ್ರಯಾಣ ಬೆಳೆಸಲು ಪರದಾಡುವಂತಾಗಿದೆ. ಬೆಂಗಳೂರು ಬಂದ್ ಆಗಿರುವುದೇ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದಾಗಿ. ಯಾವ ಯೋಜನೆಗಳು ಕೂಡ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಈಗ ಅರ್ಜಿಗಳೇ ತೆಗೆದುಕೊಳ್ಳುತ್ತಿಲ್ಲ. ಯಾಕಂದ್ರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಲೇವಡಿ ಮಾಡಿದ್ರು.