Webdunia - Bharat's app for daily news and videos

Install App

ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಅಮಿತ್ ಷಾ ಜೊತೆಗೆ ಮಾತನಾಡಿದೇವೆ- ಸಿಎಂ

Webdunia
ಶನಿವಾರ, 10 ಡಿಸೆಂಬರ್ 2022 (16:42 IST)
ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ‌ ಹೇಳಿದಾರೆ.ಸೋಮವಾರ ನಮ್ಮ ಸಂಸದರ ನಿಯೋಗ ಅಮಿತ್ ಷಾ ಭೇಟಿಗೆ ಹೇಳಿದ್ದೇನೆ.ನಾನೇ ಅಮಿತ್ ಷಾ ಜೊತೆಗೆ ಮಾತಾಡಿದ್ದೇನೆ.ನಾನು ಹೇಳಿ ಕಳುಹಿಸುತ್ತೇನೆ, ಇನ್ನು ಎರಡು ಮೂರು ದಿನಗಳಲ್ಲಿ ನೀವು ಬರಬೇಕಾಗುತ್ತದೆ ಅಂತಾ ಅಮಿತ್ ಷಾ ಹೇಳಿದ್ದಾರೆ.ಮಹಾರಾಷ್ಟ್ರ ಸಿಎಂ ಮತ್ತು ನನ್ನನ್ನು ಕರೆಯುವುದಾಗಿ ಹೇಳಿದ್ದಾರೆ.ಬಹುತೇಕ 14 ಅಥವಾ 15 ರಂದು ಆ ಸಭೆ ನಡೆಯಲಿದೆ.ಕರ್ನಾಟಕದ ನಿಲುವು ಮತ್ತು ವಾಸ್ತವಾಂಶವನ್ನು ನಾನು ಅವರಿಗೆ ತಿಳಿಸಿದ್ದೇನೆ.ಎಲ್ಲಾ ವಿವರಗಳನ್ನು ಕೂಡಾ ಕೊಟ್ಟಿದ್ದೇನೆ.ನಾನೂ ಕೂಡಾ ಹೋಗಿ ಕರ್ನಾಟಕದ ನಿಲುವನ್ನು ಪ್ರತಿಪಾದಿಸುತ್ತೇನೆ ಎಂದು ಸಿಎಂ ಹೇಳಿದ್ರು.
 
ಇನ್ನು ಈ ವೇಳೆ ಕನ್ನಡ ನಾಡು ಕಂಡಂತಹ ಶ್ರೇಷ್ಠ ನಾಯಕ ಎಸ್ ನಿಜಲಿಂಗಪ್ಪನವರು ಅವರ ಸ್ಮರಣಾರ್ಥವಾಗಿ ಇವತ್ತು ಆಚರಣೆ
ಮಾಡುತ್ತಿದ್ದೇವೆ.ಒಬ್ಬ ಕನ್ನಡ ನಾಡಿನ ಪುತ್ರ ಇಡೀ ನಾಡಿಗೆ ಜೀವವನ್ನು ಮೀಸಲಿಟ್ಟವರು.ಕನ್ನಡ ಭಾಷೆಗೆ ಅವರು ಮಾಡಿದ ಸೇವೆ ಕರ್ನಾಟಕ ಆಗಲು ಕಾರಣ .ರಾಜ್ಯಕ್ಕೆ ಆಡಳಿತದ ಭದ್ರಬುನಾದಿ ಕೊಟ್ಟು ಜನಪರ ಆಡಳಿತ ಮಾಡಲು ನಾಂದಿ ಹಾಡಿದವರು.ನಿಜಲಿಂಗಪ್ಪನವರು ತತ್ವ ಆದರ್ಶ ಎಲ್ಲರಿಗೂ ಮಾದರಿ.ಮೌಲ್ಯ ಆಧಾರಿತ ರಾಜಕಾರಣ ಕರ್ನಾಟಕದಲ್ಲಿ ಮಾಡಿದವರು ನಿಜಲಿಂಗಪ್ಪನವರು.ಭಾರತ ದೇಶದಲ್ಲಿ ಅವರ ಒಂದು ಖ್ಯಾತಿ ಇತ್ತು, ಪ್ರಭಾವ ಇತ್ತು .ಸಂವಿಧಾನ ರಚನಾ ಸಮಿತಿಯಿಂದ ಹಿಡಿದು ಎಐಸಿಸಿ ಅಧ್ಯಕ್ಷರಾಗುವವರೆಗೂ ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು .ಆಡಳಿತ ಸುಧಾರಣೆಗೆ ಬಹಳ ಮಹತ್ವವನ್ನು ಕೊಟ್ಟವರು.ನೀರಾವರಿಗೆ ಸಾಕಷ್ಟು ಒತ್ತುಕೊಟ್ಟವರು.ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ.ಅವರು ಮನಸ್ಸು ಮಾಡಿದ್ದರೆ ರಾಷ್ಟ್ರಪತಿ ಆಗಬಹುದಿತ್ತು.ಎಲ್ಲರ ಹಂಬಲವೂ ಇತ್ತು.ಆದರೆ ಅವರು ಒಪ್ಪಲಿಲ್ಲ,, ಯಾವತ್ತೂ ಅಧಿಕಾರದ ಹಿಂದೆ ಹೋದವರಲ್ಲ.ಅವರ ಹಿಂದೆಯೇ ಅಧಿಕಾರ ಬಂದಿದ್ದು .ನಮಗೆಲ್ಲರಿಗೂ ನಿಜಲಿಂಗಪ್ಪನವರು ಆದರ್ಶ ಎಂದು ಸಿಎಂ ಹೇಳಿದ್ರು
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

Pakistan ಉಗ್ರರಿಗೆ ಶುರುವಾಯ್ತು ಅಜ್ಞಾತ ಶೂಟರ್ ಭಯ

ಮುಂದಿನ ಸುದ್ದಿ
Show comments