Publish Date: Mon, 13 Jul 2020 (15:08 IST)
Updated Date: Mon, 13 Jul 2020 (15:10 IST)
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ.
ಹೀಗಂತ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಶಾಲಾ ಆರಂಭಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಧಿಕಾರಿಗಳು, ಶಿಕ್ಷಣ ತಜ್ಞರು, ವೈದ್ಯರು, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಕಾಗೇರಿ ಮಾತನಾಡಿದರು.
ಆನಲೈನ್ ಶಿಕ್ಷಣದಲ್ಲಿ ಮಕ್ಕಳ ಜೊತೆಗೆ ಪಾಲಕರನ್ನು ತೊಡಗಿಸಿಕೊಳ್ಳಬೇಕಾಗಿದೆ. ಆನ್ಲೈನ್ ಶಿಕ್ಷಣ ಸಿಗದೇ ಇದ್ದವರಿಗೆ ಪಠ್ಯಪರಿಕರಗಳು ಸಿಗುವಂತಾಗಬೇಕು ಎಂದರು.
ಶೈಕ್ಷಣಿಕ ವರ್ಷ ಆರಂಭಕ್ಕೆ ವಿಳಂಬವಾಗುತ್ತಿರುವುದರಿಂದ ಪಠ್ಯವನ್ನು ಕಡಿತಗೊಳಿಸಬೇಕು. ಕೆಲವು ಸಂಸ್ಥೆಗಳು ಈಗಾಗಲೇ ಆನ್ಲೈನ್ ಶಿಕ್ಷಣ ಆರಂಭಿಸಿದೆ. ಆದರೆ ಎಲ್ಲ ಮಕ್ಕಳಿಗೆ ಈ ಶಿಕ್ಷಣ ಸಿಗಬೇಕು. ಜೊತೆಗೆ ಇದರ ಅಡ್ಡಪರಿಣಾಮ ಆಗದಂತೆ ಎಚ್ಚರವಹಿಸಬೇಕು ಎಂದಿದ್ದಾರೆ.