Publish Date: Fri, 09 Dec 2022 (18:48 IST)
Updated Date: Fri, 09 Dec 2022 (18:54 IST)
ಹೊಸಕೋಟೆಯಲ್ಲಿ ಮೂಲ - ಕಾಂಗ್ರೆಸ್ಸಿಗರ ನಡುವೆ ಫೈಟ್ ನಡೆದಿದ್ದು,ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.ಹೊಸಕೋಟೆಯಲ್ಲಿ ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಆರೋಪ ವಿಚಾರವಾಗಿ ಮೂಲ - ವಲಸಿಗ ಕಾಂಗ್ರೆಸ್ಸಿಗರ ಫೈಟ್ ತಾರಕಕ್ಕೇರಿದೆ.ಶರತ್ ಬಚ್ಚೇಗೌಡ ಅಂಡ್ ಬೆಂಬಲಿಗರ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಆಕ್ರೋಶ ಹೊರಹಾಕಿದ್ದು,ಮೂಲ ಕಾಂಗ್ರೆಸ್ಸಿಗರ ಕಡೆಗಣಿಸಿ ಸಭೆಗಳನ್ನ ನಡೆಸ್ತಾರೆ.ಪಕ್ಷದ ಕಚೇರಿಗಳ ಉದ್ಘಾಟನೆಗೂ ಆಹ್ವಾನಿಸಲ್ಲ.ಮನಸೋ ಇಚ್ಛೆ ಪದಾಧಿಕಾರಿಗಳನ್ನ ನೇಮಕ ಮಾಡ್ತಿದ್ದಾರೆಂದು ಆರೋಪ ಮಾಡಿದ್ದು,ನಿನ್ನೆ ನಡೆದ ಕೈ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ ನಡೆದಿದೆ.ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಸಭೆ ನಡೆದಿದ್ದು,ಮೂಲ - ವಲಸಿಗರ ಫೈಟ್ ನಿಂದ ಶಾಸಕ ಶರತ್ ಗೆ ಟೆನ್ಷನ್ ಆಗಿದೆ.