Publish Date: Fri, 09 Dec 2022 (14:07 IST)
Updated Date: Fri, 09 Dec 2022 (13:38 IST)
ಬೆಂಗಳೂರು : ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆರ್ಎಸ್ಎಸ್ನ ಸಹ ಸರಕಾರ್ಯವಾಹ ಮುಕುಂದ್ ಭೇಟಿಯಾಗಿದ್ದಾರೆ.
ರೇಸ್ಕೋರ್ಸ್ ನಿವಾಸದಲ್ಲಿ ಇಂದು ಬೆಳಗ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಿಎಂ ಅವರನ್ನು ಭೇಟಿ ಮಾಡಿದ್ದರು.
ಈಗ ಮುಕುಂದ್ ಅವರು ಸಿಎಂ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಇಬ್ಬರೇ ಪ್ರತ್ಯೇಕ ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿದೆ.
ಈ ಹಿಂದೆ ಬೊಮ್ಮಾಯಿ ಅವರನ್ನು ಆರ್ಎಸ್ಎಸ್ ಮುಖ್ಯ ಕಚೇರಿ ʼಕೇಶವ ಕೃಪಾʼಗೆ ಕರೆಸಿಕೊಂಡಿದ್ದ ಮುಕುಂದ್ ಒಂದು ಗಂಟೆಗೂ ಹೆಚ್ಚು ಕಾಲ ಕೂರಿಸಿಕೊಂಡು ಚುನಾವಣೆ ತಯಾರಿ ಬಗ್ಗೆ ಮಾತನಾಡಿದರು.
Ramya kosira
Publish Date: Fri, 09 Dec 2022 (14:07 IST)
Updated Date: Fri, 09 Dec 2022 (13:38 IST)