Publish Date: Wed, 31 Jul 2019 (10:26 IST)
Updated Date: Wed, 31 Jul 2019 (10:29 IST)
ಬೆಂಗಳೂರು: ಮಾಜಿ ಸಿಎಂ ಎಸ್ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣ ಎಂದು ಪರೋಕ್ಷವಾಗಿ ಆರೋಪಿಸಿ ಸರಣಿ ಟ್ವೀಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಟ್ರೋಲ್ ಗೊಳಗಾಗಿದ್ದಾರೆ.
ಸಿದ್ಧಾರ್ಥ್ ರನ್ನು ಸಾವಿಗೆ ದೂಡಿದ ಕಾರಣಗಳು ಮತ್ತು ಅದರ ಹಿಂದಿನ ಕಾಣದ ಕೈಗಳ ಬಗ್ಗೆ ಸಮಗ್ರ ತನಿಖೆಯಾದರೆ ಮಾತ್ರ ಅವರ ಸಾವಿಗೆ ನಿಜವಾದ ಶ್ರದ್ಧಾಂಜಲಿ ಸಿಕ್ಕಂತಾಗುತ್ತದೆ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರಿಗರು ಆವತ್ತು ಡಿವೈಎಸ್ ಪಿ ಗಣಪತಿ ಮತ್ತು ಡಿಕೆ ರವಿ ಪ್ರಕರಣದಲ್ಲೂ ಹೀಗೇ ಆಗಬೇಕಿತ್ತು ಅಲ್ವಾ ಸರ್? ಎಂದು ಟಾಂಗ್ ಹೊಡೆದಿದ್ದಾರೆ. ಮತ್ತೆ ಕೆಲವರು ಬಿಜೆಪಿ ಸರ್ಕಾರ ಇದೆಯಲ್ವಾ? ಸತ್ಯ ಆಚೆಗೆ ಬಂದೇ ಬರುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.