Publish Date: Mon, 01 Jun 2020 (16:14 IST)
Updated Date: Mon, 01 Jun 2020 (16:17 IST)
ಮಹಾರಾಷ್ಟ್ರದ ಮು೦ಬೈಯಿ೦ದ ಜೂನ್ 2 ರಂದು ಶ್ರಮಿಕ್ ರೈಲು ಆಗಮಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ಗದಗ ನಗರಕ್ಕೆ ಶ್ರಮಿಕ್ ರೈಲು ಆಗಮಿಸಲಿದೆ. ಗದಗ ನಗರಕ್ಕೆ ಆಮಿಸುವವರನ್ನು ರೈಲು ನಿಲ್ದಾಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿ, ಅವರನ್ನು ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.
ಇನ್ನು, ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2 ಲಕ್ಷ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲು ಗುರಿ ನಿಗದಿಪಡಿಲಾಗಿದೆ. ಬಿತ್ತನೆಗಾಗಿ 7500 ಕ್ವಿಂಟಲ್ ಬಿತ್ತನೆ ಬೀಜ ಹಾಗೂ 14 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಗದಗ ಜಿಲ್ಲೆಯಲ್ಲಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.