Publish Date: Wed, 10 May 2023 (14:54 IST)
Updated Date: Wed, 10 May 2023 (19:37 IST)
ಪದ್ಮನಾಭ ನಗರ ವಿಧಾನಸಭ ಕ್ಷೇತ್ರ ವ್ಯಾಪ್ತಿಯ ಗಣೇಶ ಮಂದಿರ ವಾರ್ಡನಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರ ನಡುವೇ ಗಲಾಟೆಯಾಗಿದೆ.ಬಿಜೆಪಿಯ ಮಾಜಿ ಕಾರ್ಪೋರೇಟರ್ ಗೋವಿಂದ್ ರಾಜ ಹಾಗೂ ಮಾಜಿ ಬಿಜೆಪಿ ಬಿಬಿಎಂಪಿ ಸದಸ್ಯ ಕಬ್ಬಾಳ ಉಮೇಶ ನಡುವೇ ಗಲಾಟೆಯಾಗಿದೆ.ಕೈ..ಕೈ ಮಿಲಾಯಿಸುವ ಹಂತಕ್ಕೆ ಜಗಳ ನಡೆದಿದೆ.ಶಾಸಕ ಅಶೋಕ ಬೆಂಬಲಿಗ ಕಬ್ಬಾಳ ಉಮೇಶ್ ರವರಿಂದ ಮಹಿಳೆಯರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.ಹೊರ ಕ್ಷೇತ್ರದ ಗುಂಡಗಳನ್ನು ಕರೆತಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.
ಮಹಿಳೆಯರಿಗೆ ದೊಣ್ಣೆ..ಹೂ ಪಾಟ್ಟು ಗಳಿಂದ ಹಲ್ಲೆ ಮಾಡಿ ಕಬ್ಬಾಳ ಉಮೇಶ್ ಸಹಚರರು ಪರಾರಿಯಾಗಿದ್ದಾರೆ.ಸದ್ಯ ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಕೃತ್ಯಕ್ಕೆ ಬಳಸಿದ ೩ ಕಾರು ವಶಕ್ಕೆ ಪಡೆಯಲಾಗಿದೆ.