Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
2017ರಲ್ಲಿ Facebook ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಮೈಸೂರಿನ ವರುಣ ಗ್ರಾಮದ ಬರಹಗಾರ ಹಾರೋಹಳ್ಳಿ ರವೀಂದ್ರ ಅರೆಸ್ಟ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಠಾಣೆ ಪೊಲೀಸರು ರವೀಂದ್ರನನ್ನು ಬಂಧಿಸಿದ್ದಾರೆ.ಹಾರೋಹಳ್ಳಿ ರವೀಂದ್ರನ ವಿರುದ್ಧ ಪ್ರ ಕರಣ ದಾಖಲಾಗಿತ್ತು .ಆದರೆ ರವೀಂದ್ರ 2019ರಿಂದ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ಅರೆಸ್ಟ್ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು. ಜಾತ್ಯತೀತರಿಗೆ ಅಪ್ಪ-ಅಮ್ಮ ಇಲ್ಲ ಎಂದು 2017ರಲ್ಲಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಪೋಸ್ಟ್ ಮಾಡಿದ್ದರು. ಈ ಹೇ ಳಿಕೆ ವಿರುದ್ಧ ಹಾರೋಹಳ್ಳಿ ರವೀಂದ್ರ ಪೋಸ್ಟ್ ಹಾಕಿದ್ದ. ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ದಾರೆಂದು ಹಾರೋಹಳ್ಳಿ ರವೀಂದ್ರನ ವಿರುದ್ಧ ಪ್ರಕರಣದಾಖಲಾಗಿತ್ತು. ಚಿಕ್ಕೋಡಿ ನ್ಯಾಯಾಲಯದಿಂದ ನಾನ್ ಬೇಲೆಬಲ್ ವಾರೆಂಟ್ ಜಾರಿಯಾದ ಹಿನ್ನೆಲೆ ನಿನ್ನೆ ರವೀಂದ್ರನನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.