Publish Date: Wed, 19 Apr 2023 (13:37 IST)
Updated Date: Wed, 19 Apr 2023 (15:39 IST)
ಬಿಟಿಎಂ ಕ್ಷೇತ್ರದ ಸೊಲಿಲ್ಲದ ಸರದಾರ ರಾಮಲಿಂಗಾ ರೆಡ್ಡಿ ಇಂದು ಆರನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ರು. ಕೋರಮಂಗಲದ ಗಣಪತಿ ದೇವಾಲಯ ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು. ನೂರಾರು ಬೆಂಬಲಿಗರ ಸಮ್ಮುಖದಲ್ಲಿ ತೆರಳಿ ಕೋರಮಂಗಲದ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಇದಕ್ಕೂ ಮೊದಲು ಕಾಂಗ್ರೆಸ್ ಕಾರ್ತಕರ್ತರು, ಅಭಿಮಾನಿಗಳು ದೇವಾಲಯ ಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು. ಸಾಂಸ್ಕೃತಿಕ ಕಲಾ ತಂಡ ಗಳು , ಡೊಳ್ಳು ಕುಣಿತದೊಂದಿದೆ ಸ್ಟೆಪ್ಸ್ ಆಗಿದ್ರು.. ಇನ್ನೂ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರಳ ಬಹುಮತ ದೊಂದಿಗೆ ಅಧಿಕಾರಕ್ಕೆ ಬರುತ್ತೆ. ಜನ ಭ್ರಷ್ಟ ಬಿಜೆಪಿಯ ಆಡಳಿತದಿಂದ ಬೇಸೆತ್ತುಹೋಗಿದ್ದಾರೆ. ಈ ಪಾರ್ಟಿ ಜನಪರ ವಾಗಿ ಆಡಳಿತ ನಡೆಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.