Select Your Language

Notifications

webdunia
webdunia
webdunia
webdunia

ರಾಜ್ ಕಟ್ಟೆ ಮೊದಲಿನಂತೆ ಸಾರ್ವಜನಿಕ ಸಮಾರಂಭಗಳಿಗೆ ನೀಡಲಿ

ರಾಜ್ ಕಟ್ಟೆ ಮೊದಲಿನಂತೆ ಸಾರ್ವಜನಿಕ ಸಮಾರಂಭಗಳಿಗೆ ನೀಡಲಿ
bangalore , ಶನಿವಾರ, 11 ಫೆಬ್ರವರಿ 2023 (14:02 IST)
ಪದ್ಮನಾಭನಗರದಲ್ಲಿರುವ ರಾಜ್ ಕಟ್ಟೆಯನ್ನು ಸುಮಾರು 20 ವರ್ಷಗಳ ಹಿಂದೆ ವರನಟ ಡಾ. ರಾಜ್ ಕುಮಾರ್ ರವರ ಪುತ್ಥಳಿಯನ್ನು ನಿರ್ಮಿಸಲಾಗಿದ್ದು ಇಂದು ಹೀನಾಯ ಸ್ಥಿತಿಯಲ್ಲಿದೆ.ಇಲ್ಲಿನ ನಾಗರೀಕರು ರಾಜ್ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲೂ ಪರದಾಡುವಂತ ಪರಿಸ್ಥಿತಿ ನಿರ್ಮಣವಾಗಿದ್ದು ಸುಮಾರು ವರ್ಷಗಳಿಂದ ಇದಕ್ಕೆ ಬ್ರೇಕ್ ಬಿದ್ದಿದೆ. ಇದಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಅಲ್ಲಿನ ಅಧಿಕಾರಿಗಳನ್ನ ಕೇಳಲು ಹೊರಟಾಗ ಸಾರ್ವಜನಿಕರ ವಿರುದ್ಧವೇ ಕೇಸ್ ದಾಖಾಲಿಸುತ್ತೇವೆಂದು ಬೆದರಿಕೆಯನ್ನ ನೀಡಿದ್ದಾರೆ. ಇದರಿಂದ ಬೇಸತ್ತ ಜನರು ರಾಜ್ ಕಟ್ಟೆಯಲ್ಲಿ ಡಾ. ರಾಜ್ ಕುಮಾರ್ ಪುತ್ತಳಿ ಗೆ ಪೂಜೆ ಇನ್ನಿತರ ಸಮಾರಂಭಗಳು ಮೊದಲು ನಡೆಯುತ್ತಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಸಮಾರಂಭಗಳಿಗೆ ಅವಕಾಶ ಮಾಡಿಕೊಡಲು ಸಾರ್ವಜನಿಕರು ಸರ್ಕಾರಕ್ಕೆ  ಹಾಗೂ ಬಿ ಡಿ ಎ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದಾರೆ.ಇನ್ನೂ ಈ ಸ್ಥಿತಿಯಲ್ಲಿ ರಾಜ್ ಕುಮಾರ್ ಪುತ್ಥಳಿಯ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಸುಧಾಕರ್