Publish Date: Fri, 14 Jul 2023 (16:55 IST)
Updated Date: Fri, 14 Jul 2023 (17:33 IST)
ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ನಿಶಾ ನರಸಪ್ಪ ಎಂಬುವರು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ನಿಶಾ ನರಸಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.. ಇದಲ್ಲದೆ ನಿಶಾಳಿಂದ ವಂಚನೆಗೊಳಗಾದ 20ಕ್ಕೂ ಹೆಚ್ಚು ಪೋಷಕರು ಸದಾಶಿವ ನಗರ ಠಾಣೆ ಮುಂದೆ ಹಾಜರಾಗಿದ್ದಾರೆ.ಇನ್ನು ವಂಶಿಕಾ ತಾಯಿ ಸದಾಶಿವ ನಗರದ ಠಾಣೆ ಮುಂದೆ ಹಾಜರಾಗಿ, ನಿಶಾ ನರಸಪ್ಪ ಅವರನ್ನ ಅರೆಸ್ಟ್ ಮಾಡೋವರೆಗೂ ಇಲ್ಲಿಂದ ಕದಲಲ್ಲ ಎಂದು ಪಟ್ಟು ಹಿಡಿದರು. ಇನ್ನು ಹಲವಾರು ಜನರು ನಿಶಾ ಪರಸಪ್ಪಳಿಂದ ವಂಚನೆಗೊಳಗಾಗಿದ್ದು, ನಿಶಾ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ.