Publish Date: Sun, 28 Feb 2021 (12:05 IST)
Updated Date: Sun, 28 Feb 2021 (12:07 IST)
ಬೆಂಗಳೂರು : ವಂಚನೆ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದಿಂದ ಪೂರ್ಣಿಮಾ ಸವದತ್ತಿ ಅವರನ್ನು ಉಚ್ಛಾಟನೆ ಮಾಡಲಾಗಿದೆ.
ಉಚ್ಛಾಟನೆ ಮಾಡುವಂತೆ ಹು-ಧಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಮ್ರಾನ್ ಎಲಿಗಾರ ಆದೇಶಿಸಿದ್ದಾರೆ. ಪೂರ್ಣಿಮಾ ಸವದತ್ತಿ ಅವರು ಡಿ.ಕೆ.ಶಿವಕುಮಾರ್ ಕಪ್ಪು ಹಣದಿಂದ ಸಾಲ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ. ಪೂರ್ಣಿಮಾ ವಂಚನೆ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷ ಅವರನ್ನು ಉಚ್ಛಾಟನೆ ಮಾಡಿದೆ ಎನ್ನಲಾಗಿದೆ.