Publish Date: Thu, 28 Oct 2021 (17:21 IST)
Updated Date: Thu, 28 Oct 2021 (17:28 IST)
ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರೆಮರೆಯಲ್ಲಿಯೇ ಸಂಧಾನ ಸಕ್ಸಸ್ ಆದಂತೆ ಕಾಣ್ತಿದೆ. ಈ ಹಿನ್ನೆಲೆ ರಾತ್ರೋ ರಾತ್ರಿ ಠಾಣೆ ಮೆಟ್ಟಿಲೇರಿದ ದೂರುದಾರೆ ಅನುರಾಧ, ಮುಚ್ಚಿದ ಲಕೋಟೆಯಲ್ಲಿ ಮನವಿ ಸಲ್ಲಿಸಿದ್ದಾರೆ. ಎಫ್ ಐಆರ್ ಎರಡು ಹೆಸರು ತೆಗೆಯುವಂತೆ ಮನವಿ ಮಾಡಿದ್ದಾರೆ.ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ರೇಖಾ ಮತ್ತು ಮಗ ಸ್ನೇಹಿತ್ ಹೆಸರು ಕೈಬಿಡುವಂತೆ ಮನವಿ ಮಾಡಿದ್ದಾರೆ. ಅನುರಾಧ ಮಾತಿಗೆ ಪೊಲೀಸರು ಶಾಕ್ ಆಗಿದ್ದಾರೆ. ಮಧ್ಯರಾತ್ರಿ ಬಂದು ಹೆಸರು ತೆಗಿರಿ ಅಂದ್ರೆ ಆಗಲ್ಲಮ್ಮ, ಫ್ ಐ ಆರ್ ಕೋರ್ಟ್ ಗೆ ಹೋಗಿದೆ.ನಾವೇನೂ ಚೇಂಜ್ ಮಾಡಕ್ಕಾಗಲ್ಲ ಎಂದಿದ್ದಾರೆ.ಬೆಳಿಗ್ಗೆ ಇನ್ಸ್ ಪೆಕ್ಟರ್ ಬರ್ತಾರೆ ಆವಾಗ ಬನ್ನಿ ಎಂದು ಸಿಬ್ಬಂದಿ ತಿಳಿಸಿದ್ದಾರೆ.