Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಚಿವ ಶ್ರೀರಾಮುಲು ಪಿಎ ರಾಜಣ್ಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಆಮ್ ಆದ್ಮಿ ಪಕ್ಷ ಇಂದು ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದರು.. ಚಾಮರಾಜ ಪೇಟೆಯ ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದ ಆಮ್ ಆದ್ಮಿ ಮುಖಂಡರು ಶ್ರೀರಾಮುಲು ಪಿಎ ರಾಜಣ್ಣ ನನ್ನು ಕೂಡಲೇ ಬಂಧಿಸ ಬೇಕೆಂದು ಆಗ್ರಹಿಸಿದರು.. ರಾಜಣ್ಣ ಕೋಟಿ ಕೋಟಿ ಅವ್ಯವಹಾರ ಮಾಡಿರೋದು ಸಾಬೀತಾಗಿದೆ ಹೀಗಾಗಿ ಅವರನ್ನ ಬಂಧನ ಮಾಡಬೇಕು, ತಮ್ಮ ಪಿಎ ನನ್ನು ಬಿಡಿಸಲು ಸಿಸಿಬಿ ಮೇಲೆ ಶ್ರೀರಾಮುಲು ಒತ್ತಡ ಹೇರಿದ್ದಾರೆ, ಜೊತೆಗೆ ವಿಜಯೇಂದ್ರ ಅವರನ್ನ ತನಿಖೆಗೆ ಒಳಪಡಿಸಬೇಕು.
ಮುಖ್ಯ ಮಂತ್ರಿಗಳು ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು..ಇದೇ ವೇಳೆ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದು
ಕೆಎಸ್ಆರ್ ಪಿ ಬಸ್ ನಲ್ಲಿ ಕರೆದೊಯ್ದರು.