Publish Date: Wed, 09 Aug 2023 (07:16 IST)
Updated Date: Wed, 09 Aug 2023 (07:17 IST)
ಬೆಂಗಳೂರು : ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರನ್ನ ಯಾರೂ ಬ್ಲ್ಯಾಕ್ಮೇಲ್ ಮಾಡೋಕೆ ಆಗಲ್ಲ. ಅವರೇ ಬ್ಲ್ಯಾಕ್ಮೇಲ್ ಮಾಡ್ತಾರೆ. ಅವರನ್ನ ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರೇ ಎಲ್ಲರನ್ನ ಎದುರಿಸ್ತಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿದ್ದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆಯಿಂದ ಸಿಎಂ ಶಾಸಕರ ಸಭೆ ನಡೆಸ್ತಿದ್ದಾರೆ. ಶಾಸಕರು ಬರೆದ ಪತ್ರವನ್ನ ಆಧರಿಸಿ ಸಿಎಲ್ಪಿ ಕರೆದಿದ್ರು, ಈಗ ಸಭೆ ನಡೆಸ್ತಿದ್ದಾರೆ ಹಾಗಾಗಿ ಶಾಸಕರು ಬರೆದ ಪತ್ರ ನಕಲಿ ಅಲ್ಲ, ಅಸಲಿ ಅನ್ನೋದನ್ನ ಇದರಿಂದ ಒಪ್ಪಿಕೊಂಡಂಗೆ ಆಗಿದೆ.
ಖಿಅಗಳ ಬದಲಾವಣೆಗೂ ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮುಂದೆ ಶಾಸಕರ ಈ ಅಸಹನೆ ಸ್ಫೋಟಗೊಳ್ಳುತ್ತೆ. ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಉಳಿಯುತ್ತಾ? ಅನ್ನುವಂತಾಗಿದೆ. ಅಷ್ಟೊಂದು ಅಸಹಾಯಕ ಸ್ಥಿತಿಗೆ ಸರ್ಕಾರ ತಲುಪಿದೆ.