Publish Date: Fri, 13 Mar 2020 (10:07 IST)
Updated Date: Fri, 13 Mar 2020 (10:09 IST)
ಬೆಂಗಳೂರು: ಕೊರೋನಾ ವೈರಸ್ ಭೀತಿ ಕರ್ನಾಟಕದಲ್ಲೂ ವ್ಯಾಪಕವಾಗಿದ್ದು ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅದ್ಧೂರಿ ಮದುವೆಗೂ ಬಿಸಿ ತಟ್ಟಲಿದೆ.
ಈ ಮೊದಲು ಮದುವೆಯನ್ನು ರಾಮನಗರ ಬಳಿಯ 60 ಎಕರೆ ವಿಶಾಲ ಪ್ರದೇಶದಲ್ಲಿ ವಿಶೇಷ ಮಂಟಪ ಸಿದ್ಧಪಡಿಸಿ ಭರ್ಜರಿಯಾಗಿ ಮದುವೆ ನಡೆಸಲು ಎಚ್ ಡಿಕೆ ಕುಟುಂಬ ತಯಾರಿ ಆರಂಭಿಸಿತ್ತು. ಮದುವೆ ಆಮಂತ್ರಣ ಪತ್ರಿಕೆಯೂ ಮುದ್ರಣವಾಗಿತ್ತು.
ಆದರೆ ಇದೀಗ ಕೊರೋನಾ ಭೀತಿಯಿಂದಾಗಿ ಮದುವೆ ಬೆಂಗಳೂರಿನ ಅರಮನೆ ಮೈದಾನಕ್ಕೆ ಶಿಫ್ಟ್ ಆಗಬಹುದು ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಎಚ್ ಡಿಕೆ ಕುಟುಂಬ ಇದುವರೆಗೆ ಯಾವುದೇ ಪ್ರಕಟಣೆ ನೀಡಿಲ್ಲ.