Publish Date: Sat, 04 Jan 2020 (15:29 IST)
Updated Date: Sat, 04 Jan 2020 (15:30 IST)
ಮುಸ್ಲಿಂ ಸಮಾಜದ ಜನರು ಬಳ್ಳಾರಿ ಗಣಿಧಣಿ ರೆಡ್ಡಿಯ ವಿರುದ್ಧ ತೊಡೆತಟ್ಟಿದ್ದಾರೆ.
ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಬಳ್ಳಾರಿಯಲ್ಲಿ ಮುಸ್ಲಿಮರು ಕೆಂಡಕಾರಲಾರಂಭಿಸಿದ್ದಾರೆ. ಹೆಚ್.ಆರ್.ಜಿ. ವೃತ್ತ, ಗಡಿಗಿ ಚೆನ್ನಪ್ಪ ಸರ್ಕಲ್ ನಲ್ಲಿ ಮುಸ್ಲಿಮರು ದಿಢೀರ್ ಅಂತ ಪ್ರತಿಭಟನೆ ನಡೆಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡೋವಾಗ ಶಾಸಕ ಸೋಮಶೇಖರ್ ರೆಡ್ಡಿ ಅವರು ಕಾಂಗ್ರೆಸ್ ಹಾಗೂ ಮುಸ್ಲಿಂ ವಿರುದ್ಧ ಬಾಯಿಗೆ ಬಂದಂಗೆ ಮಾತನಾಡಿದ್ರು.
ಸೋಮಶೇಖರ್ ರೆಡ್ಡಿ ನೀಡಿರೋ ಹೇಳಿಕೆಯಿಂದ ರೊಚ್ಚಿಗೆದ್ದಿರೋ ಮುಸ್ಲಿಮರು ಈಗ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.