Publish Date: Wed, 27 Nov 2019 (19:00 IST)
Updated Date: Wed, 27 Nov 2019 (19:02 IST)
ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿಯಾಗಿರೋ ಕುಮಠಳ್ಳಿಯಿಂದ ಹಣ ತಗೊಳ್ಳಿ. ಆದರೆ ಓಟು ನನಗೆ ಹಾಕಿ… ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ನಡೆಸುತ್ತಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರೋ ಗಜಾನನ ಮಂಗಸೂಳಿ ಭಾಷಣದಲ್ಲಿ ಹೇಳಿಕೆ ನೀಡುತ್ತಿದ್ದು, ನಾನು ಕುಮಠಳ್ಳಿಯ ಹಾಗೇ ಓಡಿ ಹೋಗಲ್ಲ ಅಂತ ಹೇಳಿದ್ದಾರೆ.
ಕುಮಠಳ್ಳಿ ಓಡಿ ಹೋದ ಮೇಲೆ ನನ್ನ ಮೇಲೆಯೂ ಜನ ಸಂಶಯಗೊಂಡಿದ್ದಾರೆ. ನಾನು ಎಲ್ಲಿಯೂ ಓಡಿ ಹೋಗಲ್ಲ. ನಿಮಗಾಗಿ ಪ್ರಾಣ ಕೊಟ್ಟು ಸೇವೆ ಮಾಡ್ತೀನಿ. ಹೀಗಂತ ಮಂಗಸೂಳಿ ಹೇಳ್ತಿದ್ದಾರೆ.