Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದರೋಡೆಗೆ ಸಂಚು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಆ ಯುವಕನ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ಓಡಾಡ್ತಿದ್ದ ಆತನನ್ನು ನಿನ್ನೆ ಸಂಜೆ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ರು. ಇನ್ನೇನು ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಮುಂಜಾನೆ ಹೊತ್ತಿಗೆ ಪೊಲೀಸ್ ಠಾಣೆಯಲ್ಲೇ ಆತ ಸಾವನ್ನಪ್ಪಿದ್ದಾನೆ.
ಈ ಪೋಟೋದಲ್ಲಿರುವ ಈ ಯುವಕನ ಹೆಸರು ವಿನೋದ್... 23 ವರ್ಷದ ಈತ ನಗರದ ಕಾಟನ್ ಪೇಟೆಯ ಜಾಲಿ ಮೊಹಲ್ಲಾ ನಿವಾಸಿ. 2017ರಲ್ಲಿ 19 ವರ್ಷದವನಿರುವಾಗಲೇ ವಿನೋದ್ ದರೋಡೆಗೆ ಸಂಚು ಹೂಡಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದವನು ಜಾಮೀನು ಪಡೆದು ಹೊರಬಂದ ನಂತ್ರ ಮತ್ತೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ವಿನೋದ್ ವಿರುದ್ಧ ಮೂರು ಬಾರಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಪೊಲೀಸ್ರು ವಿನೋದ್ಗಾಗಿ ಹುಡುಕಾಟ ಮುಂದುವರೆಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ವಿನೋದ್ ಏರಿಯಾದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಅಲ್ಲಿಗೆ ಹೋದ ಕಾಟನ್ ಪೇಟೆ ಪೊಲೀಸರು, ವಿನೋದ್ನನ್ನ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ರು. ರಾತ್ರಿ ಏಳು ಗಂಟೆ ವೇಳೆ ಸೆಲ್ನಲ್ಲಿ ಹಾಕಲಾಗಿತ್ತು. ಹೀಗೆ ಸೆಲ್ನಲ್ಲಿರುವ ಆರೋಪಿಗಳನ್ನ 1 ಅಥವಾ 2 ಗಂಟೆಗೊಮ್ಮೆ ಎಬ್ಬಿಸಿ ಚೆಕ್ ಮಾಡೋದು ಸಾಮಾನ್ಯ ಪ್ರಕ್ರಿಯೆ. ಅಂತೆಯೇ ಇಂದು ಮುಂಜಾನೆ 3:45ರ ಸುಮಾರಿಗೆ ಆರೋಪಿ ವಿನೋದ್ನನ್ನ ಎಬ್ಬಿಸಿದಾಗ ಆತ ಪ್ರಜ್ಞೆ ಹೀನಾ ಸ್ಥಿತಿಯಲ್ಲಿರೋದು ಗೊತ್ತಾಗುತ್ತೆ. ಕೂಡಲೇ ವಿನೋದ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚೆಕ್ ಮಾಡಿದ ವೈದ್ಯರು, ಆರೋಪಿ ವಿನೋದ್ ಈಗಾಗಲೇ ಸಾವನ್ನಪ್ಪಿದ್ದಾನೆ ಅಂತ ಖಚಿತಪಡಿಸಿದ್ರು.
ವಿನೋದ್ ಸಾವಿನ ವಿಚಾರ ತಿಳಿದ ಮೇಲಾಧಿಕಾರಿಗಳು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಪೊಲೀಸ್ರ ವಶದಲ್ಲಿರುವಾಗಲೇ ವಿನೋದ್ ಸಾವನ್ನಪ್ಪಿರುವ ಹಿನ್ನೆಲೆ CRPC 176ರ ಅಡಿಯಲ್ಲಿ ಲಾಜಕಪ್ ಡೆತ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಮುಂದಿನ ತನಿಖೆಗಾಗಿ ಪ್ರಕರಣವನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇನ್ನ ಈ ವಿಚಾರ ತಿಳಿದ ಸಂಬಂಧಿಕರು, ಪೊಲೀಸ್ ಠಾಣೆ ಎದುರು ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿನೋದ್ಗೆ ನಿನ್ನೆ ಹುಷಾರಿರಲಿಲ್ಲ. ಅಲ್ಲದೆ ಕುಡಿದಿದ್ದ. ಅಂತಹ ಪರಿಸ್ಥಿತಿಯಲ್ಲೂ ಆತನನ್ನ ಕರೆದುಕೊಂಡು ಬಂದಿದ್ದಾರೆ. ವಿನೋದ್ ಸಾವು ಸಹಜವಲ್ಲ. ಅದು ಅಸಹಜ ಸಾವಾಗಿದೆ. ವಿನೋದ್ ತಲೆ ಪೆಟ್ಟಾಗಿದೆ. ಪೊಲೀಸರ ಏನೋ ಮಾಡಿದ್ದಾರೆ ಎಂದು ವಿನೋದ್ ಸ್ನೇಹಿತರು ಆರೋಪಿಸಿದ್ದಾರೆ.ದ್ಯ ಈ ಪ್ರಕರಣದ ತನಿಖೆಯನ್ನ ಸಿಐಡಿ ಅಧಿಕಾರಿಗಳು ನಡೆಸಲಿದ್ದಾರೆ. ಅಲ್ಲದೆ
ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಅದರ ವಿಡಿಯೋ ಸಹ ಮಾಡಲಾಗುವುದು. ಇನ್ನು ವಿನೋದ್ ಸಾವಿಗೆ ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ರಿಪೋರ್ಟ್ ನಂತರವಷ್ಟೇ ತಿಳಿಬೇಕಿದೆ.