Publish Date: Thu, 29 Aug 2019 (15:35 IST)
Updated Date: Thu, 29 Aug 2019 (15:37 IST)
ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪಗೆ ಮಾನ-ಮರ್ಯಾದೇನೇ ಇಲ್ಲ.
ಹೀಗಂತ ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ದೂರಿದ್ದಾರೆ.
ರಾಜ್ಯದಲ್ಲಿ ಆಡಳಿತದ ಸುಗಮ ನಿರ್ವಹಣೆಗೆ ಡಿಸಿಎಂ ಹುದ್ದೆಗಳನ್ನ ಸೃಷ್ಠಿಸಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಗೊಂದಲಗಳು ಇವೆ ಎಂದರು. ಇನ್ನು, ಮಾಜಿ ಸಂಸದ ಕೆ.ಎಚ್.ಮುನಿಯಪ್ಪಗೆ ಮಾನ ಮರ್ಯಾದೆ ಇಲ್ಲ.
28 ವರ್ಷಗಳಿಂದ ಪಕ್ಷ ವಿರೋಧಿ ಚಟುವಟಿಕೆ ಮಾಡಿಕೊಂಡು ಬಂದಿದ್ದಾರೆ ಅಂತ ಟಾಂಗ್ ನೀಡಿದ್ರು.
ಈ ಬಾರಿ ಪಕ್ಷಾತೀತವಾಗಿ ಕೋಲಾರದಲ್ಲಿ ಜನತೆ ಬಿಜೆಪಿ ಪಕ್ಷವನ್ನ ಬೆಂಬಲಿಸಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರೂ ಕೋಲಾರ್ ಚುನಾವಣೆಯಲ್ಲಿ ನಿಂತಿದ್ದರೂ ಸೋಲುತ್ತಿದ್ದರು ಎಂದರು.
ಬಿಜೆಪಿ ಬೆಂಬಲಿಸಿದ ಕಾಂಗ್ರೆಸ್ ಶಾಸಕರಿಗೆ ಮಾನ ಮಾರ್ಯಾದೆ ಇಲ್ಲ ಅಂತ ಹೇಳಿದ್ದ ಕೆ.ಎಚ್.ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರೋ ಮುನಿಸ್ವಾಮಿ, ಖಡಕ್ ತಿರುಗೇಟು ನೀಡಿದ್ದಾರೆ.