Publish Date: Mon, 23 Mar 2020 (14:48 IST)
Updated Date: Mon, 23 Mar 2020 (14:52 IST)
ರಾಜಧಾನಿಯಲ್ಲಿ ಪ್ರಮುಖ ಉದ್ಯಮಿಯಾಗಿ ಹೆಸರುವಾಸಿಯಾಗಿದ್ದ ಕಪಾಲಿ ಮೋಹನ್ ಆತ್ಮಹತ್ಯೆ ಶರಣಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.
ಬೆಂಗಳೂರಿನ ಪ್ರಮುಖ ಮುಖಂಡರು ಹಾಗೂ ಡಾ.ರಾಜ್ ಕುಮಾರ್ ಕುಟುಂಬದವರಿಗೆ ಕಪಾಲಿ ಮೋಹನ್ ಆಪ್ತರಲ್ಲಿ ಒಬ್ಬರಾಗಿದ್ದರು.
ತಮ್ಮದೇ ಒಡೆತನದಲ್ಲಿರುವ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಸುಪ್ರೀಂ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೀಟರ್ ಬಡ್ಡಿ ಹಾಗೂ ಗ್ಯಾಂಬ್ಲಿಂಗ್ ಆರೋಪದ ಮೇರೆಗೆ ಸಿಸಿಬಿ ಅಧಿಕಾರಿಗಳು ಈ ಹಿಂದೆ ಕಪಾಲಿ ಮೋಹನ್ ಮೇಲೆ ದಾಳಿ ನಡೆಸಿದ್ದರು.
ಕಪಾಲಿ ಮೋಹನ್ ಆತ್ಮಹತ್ಮೆ ಸುತ್ತ ಅನುಮಾನ ಬೆಳೆಯುತ್ತಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.