Webdunia - Bharat's app for daily news and videos

Install App

ಹಿಂದೂಗಳು ಮುಂದೆ ಬಾರದ ಜನ, ಬೇರೆಯವರನ್ನೂ ಮುಂದೆ ಬರಲು ಬಿಡಲ್ಲ: ಭಗವಾನ್ ವಿವಾದ

Krishnaveni K
ಸೋಮವಾರ, 30 ಸೆಪ್ಟಂಬರ್ 2024 (10:04 IST)
ಮೈಸೂರು: ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಮತ್ತೆ ಹಿಂದೂ ಧರ್ಮದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಹಿಂದೂಗಳು ಮುಂದೆ ಬಾರದ ಜನ, ಬೇರೆಯವರನ್ನೂ ಮುಂದೆ ಬರಲು ಬಿಡಲ್ಲ ಎಂದು ಭಗವಾನ್ ಅವಹೇಳನ ಮಾಡಿದ್ದಾರೆ.

ಮೈಸೂರಿನ ಪುರಭವನದಲ್ಲಿ ನಡೆದ ಮಹಿಷ ಮಂಡಲೋತ್ಸವದಲ್ಲಿ ಭಾಗಿಯಾದ ಭಗವಾನ್, ಹಿಂದೂಗಳು ಮುಂದೆ ಬಾರದ ಜನ, ಬೇರೆಯವರನ್ನೂ ಮುಂದೆ ಬರಲು ಬಿಡಲ್ಲ. ಹಿಂದೂ ಧರ್ಮ ಎಂಬುದು ಅದು ಹಿಂದೂಗಳ ಧರ್ಮವಲ್ಲ. ಅದು ಬ್ರಾಹ್ಮಣರ ಧರ್ಮ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರು ಬ್ರಾಹ್ಮಣ ಎನ್ನಲ್ಲ. ಅವರನ್ನು ಶೂದ್ರರು ಎನ್ನುತ್ತಾರೆ. ದೇವಸ್ಥಾನ ಕಟ್ಟುವುದು ಶೂದ್ರರು. ಆದರೆ ಅದರೊಳಗಿರುವುದು ಬ್ರಾಹ್ಮಣರು. ತಟ್ಟೆಗೆ ಕಾಸು ಹಾಕ್ತೀರಿ, ಕಾಯಿ ಕೊಟ್ಟರೆ ಅರ್ಧ ಒಡೆದು ನಿಮಗೆ ಕೊಡ್ತಾರೆ. ಶೂದ್ರರಿಗೆ ನಿಜವಾಗಿಯೂ ಮಾನ, ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು’ ಎಂದು ಭಗವಾನ್ ಹೇಳಿದ್ದಾರೆ.

ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇವಲ ಭಗವಾನ್ ಮಾತ್ರವಲ್ಲ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಪ್ರಗತಿಪರ ಚಿಂತಕರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಹಿಂದೂ ಧರ್ಮ, ದೇವರ ಬಗ್ಗೆ ವಾಚಮಗೋಚರವಾಗಿ ಮಾತನಾಡಿದ್ದಾರೆ. ಜ್ಞಾನ ಪ್ರಕಾಶ ಸ್ವಾಮೀಜಿ ಹಿಂದೂ ದೇವರಾದ ಗಣೇಶ, ಹನುಮಂತನನ್ನು ವ್ಯಂಗ್ಯ ಮಾಡಿದ್ದಾರೆ. ನಿಮಗೂ ಅಂತಹ ಮಕ್ಕಳು ಹುಟ್ಟಲಿ ನೋಡೋಣ. ಅವರನ್ನು ವಾಕಿಂಗ್ ಕರ್ಕೊಂಡು ಬನ್ನಿ ಎಂದೆಲ್ಲಾ ಲೇವಡಿ ಮಾಡಿದ್ದಾರೆ. ಇನ್ನೊಂದೆಡೆ ಇತಿಹಾಸ ತಜ್ಞ ವಿ. ನಂಜರಾಜ ಅರಸ್ ಮಹಿಷ ನಿಜವಾಗಿಯೂ ಜೀವಂತವಾಗಿ ಇದ್ದ. ಆದರೆ ಚಾಮುಂಡಿ ತಾಯಿ ಎಂಬುದು ಕಾಲ್ಪನಿಕ ಕಥಾ ಪಾತ್ರ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ಪಾಕಿಸ್ತಾನ ಹೇಳಿದ್ದು ನಿಜವಾಯ್ತು ಬೆಂಗಳೂರಲ್ಲಿ ಬಂದರು ಮಾಡಬಹುದು

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ಮುಂದಿನ ಸುದ್ದಿ
Show comments