Publish Date: Sat, 08 Jul 2023 (14:03 IST)
Updated Date: Sat, 08 Jul 2023 (16:06 IST)
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿರುವ ವಿಚಾರಕ್ಕೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಹೊಟ್ಟೆ ಉರಿಯಿಂದ ಮಾತನಾಡಬಾರದು. ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರು, ಬಹಳ ತಿಳಿದುಕೊಂಡವರು ಹೀಗೆ ಮಾತನಾಡಬಾರದು ಎಂದರು. ಇನ್ನು ಅನ್ನಭಾಗ್ಯ, ಬಸ್ ಪಾಸ್, 200 ಯುನಿಟ್ ವಿದ್ಯುತ್, ಯುವನಿಧಿ ಏನು ಶ್ರೀಮಂತರಿಗಾ..? ಎಂದು ಪ್ರಶ್ನಿಸಿದರು. ಇದಲ್ಲದೆ ನಾವು ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿರುವುದು ಬಡವರಿಗೆ.. ಹಾಗಾಗಿ ಪ್ರಹ್ಲಾದ್ ಜೋಶಿ ಸುಖಾಸುಮ್ಮನೆ ಮಾತನಾಡಬಾರದು ಎಂದರು.