Publish Date: Tue, 16 May 2023 (09:31 IST)
Updated Date: Tue, 16 May 2023 (10:10 IST)
ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡೆಸಿದ ರಾಜಕೀಯ ಷಡ್ಯಂತರದ ಕಾರಣ ಸೋಲನುಭವಿಸಿದೆ. ಸಂಘಟನೆ ಮೂಲಕ ಫಿನಿಕ್ಸ್ ನಂತೆ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.
ಜೆಡಿಎಸ್ ಮತಗಳು ಕಾಂಗ್ರೆಸ್ಗೆ ವರ್ಗಾವಣೆ ಮಾಡುವ ಮೂಲಕ ಅವರ ರಾಜಕೀಯ ಸಿದ್ಧಾಂತಕ್ಕೆ ಮಸಿ ಬಳಿದಿದ್ದಾರೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರದಲ್ಲಿ ಇದೇ ರೀತಿ ಷಡ್ಯಂತರ ನಡೆದಿದೆ.
ಇದು ಜನರಿಗೆ ಮತ್ತು ಆ ಪಕ್ಷದ ಕಾರ್ಯಕರ್ತರಿಗೆ ಮಾಡಿದ ದ್ರೋಹ, ಜೆಡಿಎಸ್ಗೆ ಮತ ನೀಡಬೇಕಿದ್ದವರನ್ನ ದಿಕ್ಕು ತಪ್ಪಿಸಿ, ಕಾಂಗ್ರಸ್ ಗೆ ಮತ ಕೊಡಿಸಿ ಅನಿವಾರ್ಯವಾಗಿ ಸೋಲನುಭವಿಸಬೇಕಾಯಿತು ಎಂದು ವಿವರಿಸಿದ್ದಾರೆ.