Webdunia - Bharat's app for daily news and videos

Install App

ಡಿಸಿಎಂ ಕೇಳೋದೇನಿದೆ ನನಗೆ ಕೊಡಲೇಬೇಕು- ಪರಮೇಶ್ವರ್

Webdunia
ಗುರುವಾರ, 18 ಮೇ 2023 (17:09 IST)
ಅಫಿಷಿಯಲ್  ಆಗಿ ಸಂಜೆ ೭ ಕ್ಕೆ‌ ಸಿಎಲ್‌ಪಿ ಸಭೆಯಿದೆ .ಅಬ್ಸರ್ವರ್ ಬಂದು ಪ್ರಕಟಣೆ ಮಾಡ್ತಾರೆ ಅವರಿಗೆ ಮಾಹಿತಿ ಕೊಟ್ಟಿದೆ ಕಳಿಸಿದ್ದಾರೆ.ಅಲ್ಲಿ ಪ್ರೆಸ್ ಮೀಟ್ ಕ್ಯಾನ್ಸಲ್ ಆಗಿದೆ.ಸಿಎಲ್ ಪಿ ನಲ್ಲಿ ಘೋಷಣೆಯಾಗುತ್ತೆ.
 
ದಲಿತ ಸಿಎಂ ಆಗಬೇಕೆಂಬ ವಿಚಾರವಾಗಿ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಅದು ನಮ್ಮ ಹೈಕಮಾಂಡ್ ಗೆ ಬಿಟ್ಟಿದ್ದು,ಯಾವ ರೀತಿ ದಲಿತ ರೆಪ್ರೆಸೆಂಟೇಷನ್  ಸರ್ಕಾರದಲ್ಲಿ ಇರಬೇಕು ಅನ್ನೋದನ್ನ ತೀರ್ಮಾನ ಮಾಡ್ತಾರೆ.ದಲಿತ ,ಲಿಂಗಾಯತ ಸಮುದಾಯ ಮೈನಾರಿಟಿ ಸಮುದಾಯ.ಸ್ಟ್ರಾಂಗ್ ಆಗಿ ಕಾಂಗ್ರೆಸ್ ಪರ ನಿಂತಿದೆ ನಿಂತಿದೆ.ದಲಿತ 51 ಸೀಟ್ ನಲ್ಲಿ 37 ಸೀಟುಗಳನ್ನ ಗೆದ್ದಿದ್ದಾರೆ.ಬೇರೆ ಕ್ಷೇತ್ರದಲ್ಲೂ ಎಫೆಕ್ಟ್ ಆಗಿದೆ.ಈ ಸಮುದಾಯಗಳಿಗೆ ಯಾವ ರೀತಿ ನ್ಯಾಯ ಕೊಡ್ತರೆ ನೋಡಬೇಕು ಅಂತಾ ಜಿ ಪರಮೇಶ್ವರ್ ಹೇಳಿದ್ದಾರೆ.
 
ಇಬ್ಬರ ನಾಯಕರ ಕಿತ್ತಾಟದ ನಡುವೆ ಸೈಲೆಂಟ್ ಆದ್ರಾ ಎಂಬ ವಿಚಾರವಾಗಿ ನಾವೆಲ್ಲಾ ಪಕ್ಷದ ಶಿಸ್ತಿನ ಸಿಪಾಯಿಗಳು,ನಾವು ಲಾಬಿ ಗಲಾಟೆ ಮಾಡೊಲ್ಲಾ ಅವಶ್ಯಕತೆ ಇಲ್ಲ.ಹೈಕಮಾಂಡ್ ವಿಶ್ವಾಸದ ಮೇಲೆ ಇದ್ದೇವೆ.ಅವರಿಗೆ ಅರ್ಥವಾಗಬೇಕು ಯಾವ ಸಮುದಾಯ ಪಕ್ಷದ ಪರ ನಿಂತಿದೆ ಅನ್ನೋದು.ಹೈಕಮಾಂಡ್ ಗಣನೆಗೆ ತೆಗೆದುಕೊಳ್ಳಬೇಕು.ಹೈ ಕಮಾಂಡ್ ಎಲ್ಲರಿಗೂ ನ್ಯಾಯವನ್ನು ಹೈಕಮಾಂಡ್ ಕೊಡ್ತಾರೆ.ರಾಜ್ಯದ ಜನರಿಗೆ ಭರವಸೆಗಳನ್ನ ಕೊಟ್ಟಿದ್ದೇವೆ ಒಳ್ಳೆಯ ಆಢಳಿತ ಕೊಡಬೇಕಿದೆ ಎಂದು ಬಿಜೆಪಿ ಆಡಳಿತ ನೋಡಿದ್ದಾರೆ.ನಾವು ಒಳ್ಳೆ ಆಡಳಿತ ಕೊಡದಿದ್ರೆ ಜನ ತಿರಸ್ಕಾರ ಮಾಡ್ತಾರೆ.ಎಲ್ಲರು ಮನಸ್ಸಲಿ ಇಟ್ಟುಕೊಂಡು ಕೆಲಸ ಮಾಡಬೇಕು ಒನ್ ಸೈಡ್ ಆಗಬಾರದು.ಬಿಜೆಪಿ ಆಡಳಿತ ನೋಡಿದ್ದಾರೆ, ಈಗ ನಮಗೆ ಅಧಿಕಾರ ಕೊಟ್ಟಿದ್ದಾರೆ.ಅಧಿಕಾರದಲ್ಲಿದ್ದೇವೆ ಅನ್ನೋದು ಒನ್ ಸೈಡ್ ಆಗಬಾರದು ಎಂದು ಡಿಸಿಎಂ ಕೇಳೋದೇನಿದೆ ನನಗೆ ಕೊಡಲೇಬೇಕು.ನಾನು ಹಿಂದೆ ಡಿಸಿಎಂ ಇದ್ದೆ ಹಾಗಾಗಿ ನಿರೀಕ್ಷೆ ಮಾಡ್ತಿನಿ.ಏನ್ ತೀರ್ಮಾನ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲಾ.ಸಂಜೆ ಏನ್ ಹೇಳ್ತಾರೆ ನೋಡಬೇಕು,ಅಧಿಕೃತವಾಗಿ ಗೊತ್ತಾಗಬೇಕು ಅಂತಾ ಪರಮೇಶ್ವರ ಹೇಳಿದ್ದಾರೆ.
 
ಒಬ್ಬರೆ ಡಿಸಿಎಂ ಇರಬೇಕೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಆ ರೀತಿ ಹೇಳೊಕೆ ಬರೊಲ್ಲ.ಒಬ್ಬೊಬ್ಬರೆ ಅಧಿಕಾರದಲ್ಲಿ ಇರಬೇಕು ಅಂತಾ ಹೇಳೋದು ಸರಿಯಲ್ಲ.ಎಲ್ಲರು ಪಕ್ಷ ಅಧಿಕಾರಕ್ಕೆ ತರೋದಕ್ಕೆ ಕಾಂಟ್ರಿಬ್ಯುಟ್ ಮಾಡಿದ್ದಾರೆ.ಇಬ್ಬರು ಆಕಾಂಕ್ಷಿಗಳಿದ್ದಾಗ ಚರ್ಚೆಯಾಗಬೇಕು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ.ಡಿಕೆಶಿವಕುಮಾರ್ ಒಬ್ಬಂಟಿ ಅಂತಾ ಅವರ ಅಭಿಪ್ರಾಯ ಹೇಳಿದ್ದಾರೆ.ನಾವು ಎಲ್ಲರು ಒಟ್ಟಿಗೆ ಇದ್ದೇವೆ.ಸಿಎಲ್ ಪಿ‌ ಆದಮೇಲೆ ಗೌರ್ನರ್ ಗೆ ಸರ್ಕಾರ ರಚನೆಗೆ  ಅಫಿಸಿಯಲ್ ಆಗಿ ಲೆಟರ್ ಕೊಡ್ತಾರೆ ಅಂತಾ ಜಿ ಪರಮೇಶ್ವರ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments