Publish Date: Thu, 22 Jun 2023 (16:59 IST)
Updated Date: Thu, 22 Jun 2023 (15:02 IST)
ಗೃಹ ಜ್ಯೋತಿ ಹೊಸ ಲಿಂಕ್ ಓಪನ್ ಆಗದೇ ಸಾರ್ವಜನಿಕರು ಹಾಗೂ ಸಿಬ್ಬಂದಿ ಪರದಾಟ ನಡೆಸ್ತಿದ್ದಾರೆ.ದಿನಕ್ಕೆ 30 ರಿಂದ 40 ಆಗುವುದಿಲ್ಲ ಎಂದು ಬೆಂಗಳೂರು ೧ ಸಿಬ್ಬಂದಿ ಹೇಳಿದ್ದು,ಈಗಾಗಲೇ ಕ್ಯೂ ನಲ್ಲಿ ನಿಂತಿರುವ 5೦ಕ್ಕೂ ಹೆಚ್ಚು ಜನರು ನಿಂತಿದ್ದಾರೆ.ಬೆಳ್ಳಗೆ 9 ಗಂಟೆಯಿಂದ ಶುರುವಾದ ಅರ್ಜಿ ಸಲ್ಲಿಕೆ ಆರಂಭವಾಗಿದೆ.ಇಲ್ಲಿಯವರೆಗೂ ಕೇವಲ ಹತ್ತೇ ಹತ್ತು ಮಾತ್ರ ಅರ್ಜಿ ಸಲ್ಲಿಕೆ ಆಗಿರುವಂತದ್ದು,ಬೆಳಗ್ಗೆಯಿಂದಲೂ ಸರ್ವರ್ ಡೌನ್ ನಿಂದ ಜನರು ಬೆಸತ್ತಿದ್ದಾರೆ.
ಮತ್ತೆ ಗೃಹ ಜ್ಯೋತಿ ಯೋಜನೆಗೆ ಸರ್ವರ್ ಕಾಟ ವಕ್ಕರಿಸಿದೆ.ಸರ್ವರ್ ಡೌನ್ನಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿ ಪರದಾಟ ನಡೆಸಿದ್ದಾರೆ.ಬೆಂಗಳೂರು ಒನ್ ಸಿಬ್ಬಂದಿಗಳ ಮೇಲೆ ಜನರಾಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವೊಮ್ಮೆ ಒಟಿಪಿ ಬರದೇ ಜನರು ಪರದಾಡುತ್ತಿದ್ದಾರೆ.