Select Your Language

Notifications

webdunia
webdunia
webdunia
webdunia

'ಬಿಜೆಪಿಗೆ ಅವಕಾಶ ನೀಡಿದ್ಯಾಕೆ: ರಾಜ್ಯಪಾಲರು ಜನರಿಗೆ ಹೇಳಿಬಿಡಲಿ'

ರಾಜ್ಯಪಾಲ
ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕೈ ಪಡೆ ತೀವ್ರ ವಾಗ್ದಾಳಿ ನಡೆಸಲಾರಂಭಿಸಿದೆ.

ಬಿ.ಎಸ್.ಯಡಿಯೂರಪ್ಪರಿಗೆ ಸರಕಾರ ರಚನೆ ಮಾಡಿ ಅಂತ ಗವರ್ನರ್ ಹೇಳಿರೋದು ಬಹಳಷ್ಟು ಜನರಲ್ಲಿ ನಿರಾಸೆ ಹಾಗೂ ಅಸಮಧಾನಕ್ಕೆ ಕಾರಣ ಆಗೋಗಿದೆ. ನಿಯಮ ಉಲ್ಲಂಘಿಸಿ ರಾಜ್ಯಪಾಲರು ನಡೆದುಕೊಂಡಿದ್ದಾರೆ. ಹೀಗಂತ ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಹೆಚ್.ಕೆ.ಪಾಟೀಲ್ ದೂರಿದ್ದಾರೆ.

ರಾಜ್ಯಪಾಲ ವಜೂವಾಯಿ ವಾಲಾ ರಾಜ್ಯದ ಜನತೆಗೆ ಸಂಪೂರ್ಣ ವಿವರ ಕೊಡಬೇಕು. ಪ್ರಮಾಣವಚನಕ್ಕೆ ಯಡಿಯೂರಪ್ಪಗೆ ಏಕಾಏಕಿಯಾಗಿ ಯಾಕೆ ಅನುಮತಿ ಕೊಡಬೇಕಿತ್ತು ಅಂತ ಕಿಡಿಕಾರಿದ್ರು.

ಅತೃಪ್ತ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕೆಂದು ಒತ್ತಾಯ ಮಾಡಿದ್ರು.  



Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಸಿ ಬ್ಯಾಂಕ್ ಮತ್ತೆ ಕೆ.ಎನ್.ರಾಜಣ್ಣ ತೆಕ್ಕೆಗೆ