Select Your Language

Notifications

webdunia
webdunia
webdunia
webdunia

ಮಾಸ್ಟರ್ ಆನಂದ್ ಪುತ್ರಿ ಹೆಸರಲ್ಲಿ ವಂಚನೆ ಪ್ರಕರಣ

ಮಾಸ್ಟರ್ ಆನಂದ್ ಪುತ್ರಿ ಹೆಸರಲ್ಲಿ ವಂಚನೆ ಪ್ರಕರಣ
bangalore , ಬುಧವಾರ, 26 ಜುಲೈ 2023 (17:54 IST)
ನಿಮ್ಮ ಮಕ್ಕಳನ್ನ ಸ್ಟಾರ್ ಮಾಡ್ತೀನಿ ಅಂತಾ ಲಕ್ಷ ಲಕ್ಷ ಪಡೆದು ವಂಚಿಸಿದ್ದ ನಿಶಾ ನರಸಪ್ಪ ಮತ್ತಷ್ಟು ಭಯಾನ ಸತ್ಯಗಳು ಬೆಳಕಿಗೆ ಬಂದಿದೆ.ಇದುವರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಐವತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.ಒಟ್ಟಾರೆಯಾಗಿ ಇದುವರೆಗೆ ಐವತ್ತು ಲಕ್ಷಕ್ಕೂ ಅಧಿಕ ಹಣ ನುಂಗಿ ನೀರು ಕುಡಿದಿರೋದಾಗಿ ಗೊತ್ತಾಗಿದೆ.ಇನ್ನೊಂದು ಇಂಟರಸ್ಟಿಂಗ್ ಸಂಗತಿ ಅಂದ್ರೆ ನಿಶಾ ನರಸಪ್ಪ ಬ್ಯಾಂಕ್ ಖಾತೆಯಲ್ಲಿ 2 ಕೋಟಿಯಷ್ಟು ವ್ಯವಹಾರ ನಡೆದಿದೆ.ಇನ್ನೇನು ಒಳ್ಳೆ ದುಡ್ಡೇ ಇಟ್ಟಿದ್ದಾಳಲ್ಲ ಮೋಸ ಹೋದವರ ಕೈಗೆ ಹಣ ಸಿಗುತ್ತೆ ಅಂದುಕೊಂಡ್ರೆ ನಿರಾಸೆಯಾಗೋದು ಗ್ಯಾರಂಟಿ.ಯಾಕಂದ್ರೆ ಸದ್ಯ ಆಕೆಯ ಕಾಕತೆಯಲ್ಲಿ ಉಳಿದಿರೋದು ಕೇವಲ 8 ಸಾವಿರ ಹಣ ಮಾತ್ರ.ಇನ್ನೂ ಹೈಫೈ ಶೋಕಿಗೆ ಬಿದ್ದಿದ್ದ ನಿಶಾ ನರಸಪ್ಪ.ಪೋಷಕರಿಗೆ ವಂಚಿಸಿ ಬಾರ್, ಪಬ್, ಹೈಫೈ ಹೋಟೇಲ್ ಗಳಲ್ಲೇ ಪಾರ್ಟಿ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದಳು.ಅಲ್ಲದೇ ಅಧಿಕ ಬಡ್ಡಿಗೆ ಹಣ ಪಡೆದು ಸಾಕಷ್ಟು ಜನ್ರಿಗೆ ವಂಚನೆ ಮಾಡಿರೊ ಆರೋಪ ಕೂಡ ಇದೆ.20% ಬಡ್ಡಿ ನೀಡುತ್ತೇನೆ ಎಂದು ಲಕ್ಷ ಲಕ್ಷ ವಂಚನೆ ಮಾಡಿದ್ದಾಳೆ‌ ಎನ್ನಲಾಗ್ತಿದೆ.ಆದ್ರೆ ಈ ಬಗ್ಗೆ ಇದುವರೆಗೂ ಯಾವುದೇ ದೂರು ಇದುವರೆಗೂ ದಾಖಲಾಗಿಲ್ಲ.ಸದ್ಯ 
ತನಿಖೆ ಮುಂದುವರೆಸಿರೊ ಸದಾಶಿವನಗರ ಪೊಲೀಸರಿಗೆ ಮತ್ತಷ್ಟು ಬೆಚ್ಚಿ ಬೀಳೊ ಸಂಗತಿಗಳನ್ನು ಹೊರ ತರಲಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಡೇಂಜರಸ್ ಡೆಂಘಿ ನರ್ತನ