Publish Date: Fri, 27 Oct 2023 (14:47 IST)
Updated Date: Fri, 27 Oct 2023 (14:58 IST)
ಹೈಕಮಾಂಡ್ ಭೇಟಿ ಸಾಧ್ಯವಾಗದ ವಿಚಾರವೆಂದು ನಗರದಲ್ಲಿ ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.ಅಲ್ಲದೇ ನಾವು ಪಕ್ಷದ ವ್ಯವಸ್ಥೆಗೆ ಪೂರಕವಾಗಿರಬೇಕು.ಎಲ್ಲವನ್ನೂ ಸಹಿಸಿಕೊಳ್ಳಬೇಕು,ವಕ್ರದೃಷ್ಟಿಯಿಂದ ನೋಡಬಾರದು.ನಮ್ಮ ನಾಯಕರು ಸತತವಾಗಿ ಸಭೆಗಳಲ್ಲಿ ಬ್ಯುಸಿ ಆಗಿದ್ರು.
ರಾತ್ರಿ 11 ಗಂಟೆವರೆಗೂ ನಡ್ಡಾ ಅವರು ಬೇರೆ ಬೇರೆ ರಾಜ್ಯಗಳ ಜತೆ ಸಭೆಯಲ್ಲಿ ಇದ್ರು.ಇವತ್ತು ಉಳಿಯಲು ಹೇಳಿದ್ರು, ಆದ್ರೆ ನಾನು ತಮಿಳುನಾಡಿಗೆ ಹೋಗಬೇಕಿತ್ತು.ಹಾಗಾಗಿ ಬೆಂಗಳೂರಿಗೆ ಹೊರಟು ಬಂದೆ.ಅವರೇ ತಮಿಳುನಾಡಿಗೆ ಹೋಗಲು ಆದೇಶ ಮಾಡಿದ್ರು, ಇವತ್ತು ತಮಿಳುನಾಡಿಗೆ ಹೋಗುತ್ತಿದ್ದೇನೆ.ಹೈಕಮಾಂಡ್ ನಾಯಕರ ಭೇಟಿ ಆಗದ ಬಗ್ಗೆ ಖಂಡಿತವಾಗಿಯೂ ನನಗೆ ಬೇಸರ ಇಲ್ಲ ಎಂದು ಸಂಸದ ಸದಾನಂದಗೌಡ ಸ್ಪಷ್ಟನೆ ನೀಡಿದ್ದಾರೆ.