Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹಿಜಾಬ್ & ಕೇಸರಿ ಶಾಲು ವಿವಾದದ ಪ್ರಕರಣ ಸಂಬಂಧ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸಮವಸ್ತ್ರದ ಬಗ್ಗೆ ಮಕ್ಕಳಿಗೆ ತಲೆ ಕೆಡಿಸಿರೋದು ವಿರೋಧ ಪಕ್ಷದವರು.
ಕೋರ್ಟ್ ನಲ್ಲಿ ತೀರ್ಪು ಬರೋ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಎಲ್ಲರೂ ಕೂಡಾ ಸಮಾಧಾನವಾಗಿ ಇರಬೇಕು. ಮಕ್ಕಳಲ್ಲಿ ವಿಷ ಬೀಜ ಕೆಲಸವನ್ನು ವಿರೋಧ ಪಕ್ಷ ಮಾಡುತ್ತಿದೆ. ಅಲ್ಲದೇ ಇದನ್ನು ಅರ್ಥ ಮಾಡಿಕೊಂಡು ಶಾಲಾ ಮಕ್ಕಳಲ್ಲಿ ಎಲ್ಲರೂ ಸರಿಸಮನಾಗಿ ಇರಬೇಕು. ಅಲ್ಲದೇ ಇಂದು ಹೈಕೋರ್ಟ್ ತೀರ್ಪು ಬರಲಿದ್ದು, ಬಳಿಕ ಎಲ್ಲಾ ಸರಿಯಾಗಲಿದೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.