Publish Date: Sun, 06 Nov 2022 (17:29 IST)
Updated Date: Sun, 06 Nov 2022 (17:37 IST)
ರೇಣುಕಾಚಾರ್ಯ ಸಹೋದರನ ಪುತ್ರ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿದ್ದು, ಇದು ಕೊಲೆಯೋ, ಅಪಘಾತವೋ ಎಂಬ ಬಗ್ಗೆ ಅನುಮಾನ ಮೂಡಿದೆ. ಆದರೆ ಚಂದ್ರು ಮನೆಯವರು ಇದು ಹತ್ಯೆ ಎಂದು ಹೇಳುತ್ತಿದ್ಧಾರೆ. ಆದರೆ ಚಂದ್ರಶೇಖರ್ ಸಾವಿಗೆ ಓವರ್ ಸ್ಪೀಡ್ ಕಾರಣವಾಯ್ತ ಎಂಬ ಅನುಮಾನ ಮೂಡಿದೆ.
ಶಿವಮೊಗ್ಗದ ವಿದ್ಯಾನಗರದಲ್ಲಿ ರಾತ್ರಿ 11.21ಕ್ಕೆ ಚಂದ್ರಶೇಖರ್ ಕರೆ ಮಾಡಿದ್ದಾರೆ. ಈ CDR ಟೈಂ ದಾಖಲಾಗಿದೆ.
ಇದೀಗ ಮುತ್ತಿನಕೊಪ್ಪದಿಂದ ಶಿವಮೊಗ್ಗಕ್ಕೆ ಕೇವಲ 11 ನಿಮಿಷದಲ್ಲಿ ಬಂದ್ರಾ ಎಂಬ ಅನುಮಾನ ಮೂಡಿದೆ.
ಪೆಟ್ರೋಲ್ ಬಂಕ್ನ CCTVಯಲ್ಲಿ ಕಾರು ಪಾಸಾದ ದೃಶ್ಯ ಸೆರೆಯಾಗಿದೆ. ಅಷ್ಟು ವೇಗವಾಗಿ ರೇಣುಕಾಚಾರ್ಯ ಪುತ್ರ ಶಿವಮೊಗ್ಗ ತಲುಪಿದ್ರಾ ಎಂಬ ಗುಮಾನಿ ಎದ್ದಿದೆ.