Publish Date: Wed, 29 Jan 2020 (20:17 IST)
Updated Date: Wed, 29 Jan 2020 (20:19 IST)
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗದ್ದುಗೆಗಾಗಿ ಗುದ್ದಾಟ ಮುಂದುವರಿದಿರುವಂತೆ ದೆಹಲಿ ಸಿಎಂಗೆ ಉಗ್ರಗಾಮಿ ಪಟ್ಟ ಕಟ್ಟಲಾಗಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಉಗ್ರಗಾಮಿ ಮಾತ್ರವಲ್ಲ, ಅವರೊಬ್ಬ ನಕ್ಸಲ್ ಆಗಿದ್ದಾರೆ. ಹೀಗಂತ ಭಾರತೀಯ ಜನತಾ ಪಕ್ಷದ ಸಂಸದ ಪರ್ವೇಶ್ ವರ್ಮಾ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸಂಸದನ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉಗ್ರಗಾಮಿಗಳು ಹಾಗೂ ನಕ್ಸಲ್ ರು ಸರಕಾರದ ಆಸ್ತಿಗಳನ್ನು ಹಾಳು ಮಾಡುತ್ತಾರೆ. ಅದೇ ಮಾದರಿಯಲ್ಲಿ ಅರವಿಂದ ಕೇಜ್ರಿವಾಲ್ ಮಾಡ್ತಿರೋ ಕೆಲಸ ಇದೆ ಅಂತ ಪರ್ವೇಶ್ ವರ್ಮಾ ಟೀಕೆ ಮಾಡಿದ್ದಾರೆ.