Publish Date: Wed, 20 Sep 2023 (17:20 IST)
Updated Date: Wed, 20 Sep 2023 (17:39 IST)
ಡಿಸಿಎಂ ಡಿ.ಕೆ.ಶಿವಕುಮಾರ್ ನೀರಿನ ಕಳ್ಳ.. ಡಿಕೆಶಿ ರೈತರಿಗೆ ದ್ರೋಹ ಮಾಡಿದ್ದಾರೆ.. ಡಿಸಿಎಂ ಅಯೋಗ್ಯ ಎಂದು ಮಾಜಿ ಸಚಿವ K.S.ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರ ಕುರಿತು ಮಾತನಾಡಿದ್ರು.. ಮೈತ್ರಿ ಮಾತುಕತೆ ನಡೆಯುತ್ತಿದೆ, ಏನಾಗಿದೆ ಗೊತ್ತಿಲ್ಲ. ಮಾಧ್ಯಮದಲ್ಲಿ ಬಂದಿರೋದು ಅಷ್ಟೇ ಗೊತ್ತು ಎಂದ್ರು.. ಇನ್ನು ಮೂವರು ಡಿಸಿಎಂ ನೇಮಕ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿಗೆ ಅವಮಾನ ಮಾಡಲು ಸಿದ್ದರಾಮಯ್ಯ ಚೇಲಾಗಳು ಪಣ ತೊಟ್ಟಿದ್ದಾರೆ. ಡಿಕೆಶಿ ಚೇಲಾಗಳು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ವಿಚಾರಗಳಲ್ಲಿ ಗೊಂದಲವಿದೆ. ಲೋಕಸಭೆ ಚುನಾವಣೆಯ ಪೂರ್ವ ಅಥವಾ ಬಳಿಕ ರಾಜ್ಯ ಸರ್ಕಾರ ಬೀಳುತ್ತೆ ಎಂದು ಭವಿಷ್ಯ ನುಡಿದರು.