Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕರ್ನಾಟಕ ರಾಜ್ಯದಲ್ಲಿ 150 ಸ್ಥಾನ ಗೆದ್ದು ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ.
ಬಸವರಾಜ ಬೊಮ್ಮಾಯಿಯವರ ಎಲ್ಲ ಅಭಿವೃದ್ಧಿಗೆ ಬಿಜೆಪಿ ಸದಾ ಬೆಂಬಲ ಕೊಡುತ್ತದೆ. ಬಿಜೆಪಿಗೆ 200 ಸ್ಥಾನ ಬರುತ್ತೆ ಎಂದು ಪಾದಯಾತ್ರೆ ಮಾಡ್ತಿದ್ದಾರೆ.
ಈ ಪಾದಯಾತ್ರೆಯೇ, ಕಾಂಗ್ರೆಸ್ನ ಅಂತ್ಯಯಾತ್ರೆ ಆಗಲಿದೆ ಎಂದು ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
ಕೊವಿಡ್ ಸಂಕಷ್ಟವನ್ನು ಬಿಎಸ್ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದರು. ಇದನ್ನು ಬೊಮ್ಮಾಯಿ ಮುಂದುವರಿಸಿಕೊಂಡು ಹೋಗಿದ್ದಾರೆ. ಮುಂದಿನ ಚುನಾವಣೆಯ ನೇತೃತ್ವವನ್ನೂ ಬೊಮ್ಮಾಯಿ ವಹಿಸಲಿ ಎಂದು ಸಿಎಂಗೆ ಅಭಿನಂದನಾ ಸಮಾರಂಭದಲ್ಲಿ ಸದಾನದಂಗೌಡ ಹೇಳಿಕೆ ನೀಡಿದ್ದಾರೆ.