Publish Date: Mon, 16 Oct 2023 (15:00 IST)
Updated Date: Mon, 16 Oct 2023 (14:40 IST)
ಪಂಚ ರಾಜ್ಯ ಚುಬಾವಣೆ ಹತ್ತಿರ ಬರ್ತಿದ್ದ ಹಾಗೆ ಕಾಂಗ್ರೆಸ್ ಚಟುವಟಿಕೆ ಚುರುಕಾಗಿದೆ.ಪಂಚ ರಾಜ್ಯಗಳಿಗೆ ಹಣ ಕಳಿಸುವ ಕಾಂಗ್ರೆಸ್ ಸಂಚು ಬಯಲಾಗಿದೆ.ಎಷ್ಟು ಸಾವಿರ ಕೋಟಿ ಕಳಿಸ್ತಿದಾರೆ ಹೊರ ರಾಜ್ಯಗಳಿಗೆ ಅಂತ ಯಾರಿಗೂ ಅಂದಾಜು ಸಿಕ್ತಿಲ್ಲ.ಒಳ್ಳೆ ಆಡಳಿತ ಕೊಡ್ತೀವಿ ಅಂತ ಹಗಲು ದರೋಡೆಯಲ್ಲಿ ಸರ್ಕಾರ ಮುಳುಗಿದೆ.ದಸರಾದಲ್ಲಿ ಕಲಾವಿದರಿಂದಲೂ ಕಮಿಷನ್ ಕೇಳುವ ಮಟ್ಟಕ್ಕೆ ಇವರು ಇಳಿದಿದ್ದಾರೆ.ಕಮೀಷನ್ ತಳಮಟ್ಟದ ಅಧಿಕಾರಿಗಳವರೆಗೂ ಮುಟ್ಟಿದೆ.ಇದು ಎಟಿಎಂ ಸರ್ಕಾರ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ.ಕಾಂಗ್ರೆಸ್ ನವ್ರು ಲೂಟಿಗೆ ಮೇನ್ ಬ್ಯಾಂಕ್ ತೆರೆದಿದ್ದಾರೆ.'ಶಿವಕುಮಾರ್ ಬ್ಯಾಂಕ್ ಇಂಡಿಯಾ' ತೆರೆದಿದ್ದಾರೆ.ಹಣ ವಸೂಲಿ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳಿಸ್ತಿರೋದು ಸ್ಪಷ್ಟ ಆಗಿದೆ ಎಂದು ವಿಜಯೇಂದ್ರ ಡಿಸಿಎಂ ಡಿಕೆಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.