Publish Date: Wed, 22 Nov 2023 (14:03 IST)
Updated Date: Wed, 22 Nov 2023 (15:10 IST)
ಕಾಂಗ್ರೆಸ್ ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಹಣ ಕೊಡಬೇಕು ಅನ್ನೋ ವಿಚಾರವಾಗಿ ನನಗೆ ಗೊತ್ತಿಲ್ಲ.ಕಾಂಗ್ರೆಸ್ ನಲ್ಲಿ ಪುಕ್ಸಟ್ಟೆ ಸಿಗೋದಿಲ್ಲ ಅಂತ ಕಾಂಗ್ರೆಸ್ ಕಾರ್ಯಕರ್ತರೇ ಮಾತಾಡ್ತಾರೆ.ಅದನ್ನ ಹರಾಜ್ ಹಾಕುವ ಕೆಲಸ ಮಾಡುತ್ತಿರಬಹುದು ಎಂದು ಸಿಟಿ ರವಿ ಹೇಳಿದ್ದಾರೆ.
ಮೂಲ ಕಡತ ನಾಪತ್ತೆ ವಿಚಾರವಾಗಿ ಈಶ್ವರಪ್ಪ ಅವರು ಒಂದು ಮಾತು ಹೇಳಿದ್ರು.ರಾಜ್ಯಪಾಲರ ಸಹಿ ಇಲ್ಲದ ಇಲ್ಲದ ಆದೇಶ ಅಂತ ಹಾಗೆ ಆಯೋಗದ ಅಧ್ಯಕ್ಷರ ಸಹಿ ಇಲ್ಲದ ವರದಿ ಇದಾಗಿದೆ.ರಿಸರ್ವ್ ಬ್ಯಾಂಕ್ ಅಧ್ಯಕ್ಷರ ಸಹಿ ಇಲ್ಲದ ನೋಟ್ ತರ ಈ ವರದಿ ಆಗಿದೆ.ತುಳಿತಕ್ಕೊಳಗಾದ ಜನರಿಗೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಪಕ್ಷದ ಆಶಯವಾಗಿದೆ.
ಅವಕಾಶ ವಂಚಿತ ಸಮಾಜ ಇದೆ, ಅಂತ ಸಮಾಜಕ್ಕೆ ಶೇ. 50 ರಷ್ಟು ಮೀಸಲಾತಿ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ.ಹೊರಗೆ ತೋರ್ಪಡಿಕೆಗೆ ಮಾತಾಡ್ತಿಲ್ಲ.ಅನೇಕ ನಾಮಿನೇಟ್ ಮಾಡಿರೋದೆಲ್ಲ ಸಣ್ಣ ಸಮುದಾಯಕ್ಕೆ ನೀಡಲಾಗಿದೆ.ನಾನು ನಮ್ಮ ಪಕ್ಷದ ವೇದಿಕೆಯಲ್ಲಿ ಅದೇ ವಿಚಾರ ಚರ್ಚೆ ಮಾಡಿದ್ದೇನೆ.ವಿಧಾನಪರಿಷತ್ ಚುನಾವಣೆ, ಎಲ್ಲಾ ಹುದ್ದೆಗಳಲ್ಲೂ ಮೀಸಲಾತಿ ಸಿಗಲಿ ಅಂತ ಒಂದು ನಿರ್ಧಾರಕ್ಕೆ ಬರಬೇಕು ಎಂದು ಸಿಟಿ ರವಿ ಹೇಳಿದ್ದಾರೆ.