Publish Date: Sat, 23 May 2020 (19:57 IST)
Updated Date: Sat, 23 May 2020 (19:59 IST)
ಸಾಂಸ್ಥಿಕ ಕ್ವಾರಂಟೈನ್ ಅಥವಾ ಹೋಂ ಕ್ವಾರಂಟೈನ್ ಬಿಟ್ಟು ಹೊರಬಂದವರ ವಿರುದ್ಧ ಕೇಸ್ ದಾಖಲಾಗಲಿದೆ.
ಕರ್ನಾಟಕ ಸರ್ಕಾರದ ವತಿಯಿಂದ ಈಗಾಗಲೇ ಹೋಂ ಕ್ವಾರಂಟೈನ್ ಇರುವಂತಹ ವ್ಯಕ್ತಿಗಳ ಮೊಬೈಲ್ ಗೆ ಆ್ಯಪನ್ನು ಅಳವಡಿಸಿದ್ದು, ಅವರು ಯಾವುದೇ ಕಾರಣಕ್ಕೂ ಕ್ವಾರಂಟೈನಿಂದ ವ್ಯಕ್ತಿ ಹೊರಗೆ ಬರುವಂತಿಲ್ಲ.
ಒಂದು ವೇಳೆ ಕ್ವಾರಂಟೈನ್ ಬಿಟ್ಟು ಹೊರ ಬಂದಲ್ಲಿ ಅವರ ವಿರುದ್ಧ ಕಾನೂನಿನಂತೆ ಕ್ರಮ ವಹಿಸಲಾಗುವುದು ಹಾಗೂ ಎಫ್ಐಆರ್ ಕೂಡ ದಾಖಲಿಸಲಾಗುತ್ತದೆ.
ಹೀಗಂತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ತಿಳಿಸಿದೆ.