Publish Date: Mon, 27 Apr 2020 (15:57 IST)
Updated Date: Mon, 27 Apr 2020 (15:59 IST)
ಲಾಕ್ ಡೌನ್ ಸಡಿಲಿಕೆ ಜಾರಿಗೊಳ್ಳುತ್ತಿರುವ ಬೆನ್ನಲ್ಲೇ ಪ್ರಸಿದ್ಧ ಪಡೆದ ಬೆಣ್ಣೆ ದೋಸೆ ಹೋಟೆಲ್ ಗಳು ಶುರುವಾಗಿವೆ.
ವಾಣಿಜ್ಯ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಕೆಲ ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ.
ಹಾರ್ಡ್ ವೇರ್ ಗಳು, ಬೆಣ್ಣೆದೋಸೆ ಹೋಟೆಲ್ ಗಳು, ಎಲೆಕ್ಟ್ರಾನಿಕ್ ಸ್ಟೋರ್ ಗಳು, ಬಿತ್ತನೆ ಬೀಜ ರಸಗೊಬ್ಬರದ ಅಂಗಡಿಗಳು ತೆರೆದಿದ್ದು ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳಿದೆ.
ಹದ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಕೂಡ ಆರಂಭಗೊಂಡಿದ್ದು, ಜಮೀನು ಹದಗೊಳಿಸುವ ಕಾಯಕದಲ್ಲಿ ರೈತಾಪಿ ವರ್ಗ ನಿರತವಾಗಿದೆ.
ಗ್ರಾಹಕರು ಮಾರುಕಟ್ಟೆಗೆ ಲಗ್ಗೆ ಇಟ್ಟು ತಮ್ಮಿಷ್ಟದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.